ಮನೆ ಸುದ್ದಿ ಜಾಲ ಯುಪಿಎಸ್‌ ಸಿಯಲ್ಲಿ ವಿನಯ್ ಕುಮಾರ್, ಮೇಘನಾ ಸಾಧನೆ: ಅಭಿನಂದಿಸಿದ ಸಚಿವ ಎಸ್.ಟಿ.ಸೋಮಶೇಖರ್‌

ಯುಪಿಎಸ್‌ ಸಿಯಲ್ಲಿ ವಿನಯ್ ಕುಮಾರ್, ಮೇಘನಾ ಸಾಧನೆ: ಅಭಿನಂದಿಸಿದ ಸಚಿವ ಎಸ್.ಟಿ.ಸೋಮಶೇಖರ್‌

0

ಮೈಸೂರು(Mysuru)-ಕೇಂದ್ರ ಲೋಕಸೇವಾ ಆಯೋಗ (UPSC) ವು 2021ನೇ ಸಾಲಿನಲ್ಲಿ ನಡೆಸಿದ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಸಾಧನೆ ಮಾಡಿರುವ ವಿನಯ್ ಕುಮಾರ್‌ ಹಾಗೂ ಪಿರಿಯಾಪಟ್ಟಣದ ಕೆ.ಟಿ.ಮೇಘನಾ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್‌ ಅಭಿನಂದಿಸಿದ್ದಾರೆ.

ಬೀದರ್ ಮೂಲದ ವಿನಯ್ ಕುಮಾರ್ 151 ನೇ ರ್ಯಾಂಕ್‌ ಪಡೆದಿದ್ದು, ಕರ್ನಾಟಕ ರಾಜ್ಯ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 2019ರ ಸಾಲಿನ ಕೆಎಎಸ್ ಅಧಿಕಾರಿಯಾಗಿದ್ದಾರೆ.

ಪಿರಿಯಾಪಟ್ಟಣ ತಾಲೂಕಿನ ಕುಡುಕೂರು ಗ್ರಾಮದ ಮೇಘನಾ 425 ನೇ ರ್ಯಾಂಕ್‌ ಪಡೆದುಕೊಂಡಿದ್ದಾರೆ. ರೆಟಿನಾ ಸಮಸ್ಯೆಯಿಂದ ದೃಷ್ಟಿ ಕಳೆದುಕೊಂಡಿದ್ದರು. ಆದರೆ ಸಮಸ್ಯೆಯನ್ನು ಮೆಟ್ಟಿನಿಂತು ಯುಪಿಎಸ್ ಸಿಯಲ್ಲಿ ಉತ್ತಮ ಶ್ರೇಣಿಯಲ್ಲಿ ಸ್ಥಾನ ಗಳಿಸಿರುವುದು ಹೆಮ್ಮೆಯ ಸಂಗತಿ.

ಇವರ ಸಾಧನೆ ಯುವಕರಿಗೆ ಪ್ರೇರಣೆಯಾಗಲಿ. ಮತ್ತಷ್ಟು ಅಭ್ಯರ್ಥಿಗಳು ಇದೇ ರೀತಿ ಸಾಧನೆ ಮಾಡಿ ರಾಜ್ಯಕ್ಕೆ ಕೀರ್ತಿ ತರಲಿ ಹಾಗೂ ವಿನಯ್ ಕುಮಾರ್, ಮೇಘನಾ ಸೇರಿದಂತೆ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ರಾಜ್ಯದ ಎಲ್ಲಾ 32 ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.