ಮನೆ ರಾಜಕೀಯ ಪಲಾನುಭವಿಗಳ ಸಮೃದ್ಧಿಯೇ ಮೋದಿಯ ಗ್ಯಾರಂಟಿ: ಶಾಸಕ ಡಿ.ಎಸ್. ಅರುಣ್

ಪಲಾನುಭವಿಗಳ ಸಮೃದ್ಧಿಯೇ ಮೋದಿಯ ಗ್ಯಾರಂಟಿ: ಶಾಸಕ ಡಿ.ಎಸ್. ಅರುಣ್

0

ಭದ್ರಾವತಿ: ಇಂದು ಭದ್ರಾವತಿ ತಾಲೂಕು ಅರಹತೊಳಲು ಕೈಮರದ ಬಿಜೆಪಿ ಕಛೇರಿಯಲ್ಲಿ ನಡೆದ ಅರಬಿಳಚಿ ಮಹಾಶಕ್ತಿ ಕೇಂದ್ರದ ಸಭೆಯಲ್ಲಿ ರಾಜ್ಯ ಬಿಜೆಪಿ ಕಾರ್ಯದರ್ಶಿಗಳು ಮತ್ತು ವಿಧಾನ ಪರಿಷತ್ ಶಾಸಕರಾದ ಶ್ರೀ ಡಿ ಎಸ್ ಅರುಣ್ ಅವರು ಪಾಲ್ಗೊಂಡು ಮಾತನಾಡಿದರು.

ಕೇಂದ್ರದ ಸರ್ಕಾರದ ಯೋಜನೆಗಳು, ಸಂಸದರಾದ   ಬಿ ವೈ ರಾಘವೇಂದ್ರ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು, ಸ್ವಚ್ಚ ಭಾರತ್ ಯೊಜನೆ, ಲೋಕ ಸಭೆಯಲ್ಲಿ ಮಹಿಳಾ ಮೀಸಲಾತಿ, ಜಲ್ ಜೀವನ್ ಮಿಷನ್ ಯೊಜನೆ, ರೈಲ್ವೆ, ರಸ್ತೆ, ಸಾರಿಗೆ, ವಿಮಾನ ನಿಲ್ದಾಣ, ಶಿಕ್ಷಣ ಸಂಸ್ಥೆ, ಹೀಗೆ ಹಲವು ಯೋಜನೆಗಳ ಕುರಿತು ತಿಳಿಸಿದರು.

ಈ ಸಂಧರ್ಭದಲ್ಲಿ ಮಾಜಿ ಶಾಸಕರಾದ ಕುಮಾರಸ್ವಾಮಿ ಅವರು, ವಿಧಾನ ಸಭಾ ಕ್ಷೇತ್ರದ ಸಂಚಾಲಕರಾದ ವಿರೂಪಾಕ್ಷಪ್ಪ ಮಂಡಲ ಅಧ್ಯಕ್ಷರಾದ ಮಲ್ಲೇಶ್,ಜಿಲ್ಲಾ ಚುನಾವಣಾ ಪ್ರಮುಖ್ ಶ್ರೀನಿವಾಸ್ ಅವರು, ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಯೋಗೀಶ್, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ರೇಖಾ ಬೋಸ್ಲೆ, ಮಂಡಲ ಪ್ರಧಾನ ಕಾರ್ಯದರ್ಶಿ ಚಂದ್ರು ಕುಮಾರ್ ಹಾಗೂ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

ಹಿಂದಿನ ಲೇಖನಅನಾರೋಗ್ಯದಿಂದ ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ ನಿಧನ
ಮುಂದಿನ ಲೇಖನಅಬಕಾರಿ ನೀತಿ ಹಗರಣದಲ್ಲಿ ಎಎಪಿ ನಾಯಕನ ವಿರುದ್ಧ ಹಣದ ಜಾಡು ಹಿಡಿಯಲು ಇಡಿಗೆ ಸಾಧ್ಯವಾಗಿಲ್ಲ: ಎಎಪಿ ನಾಯಕಿ ಅತಿಶಿ