ಮನೆ ರಾಷ್ಟ್ರೀಯ ಅದಾನಿ ವಿವಾದ: ಉಭಯ ಸದನಗಳ ಕಲಾಪ ಮುಂದೂಡಿಕೆ

ಅದಾನಿ ವಿವಾದ: ಉಭಯ ಸದನಗಳ ಕಲಾಪ ಮುಂದೂಡಿಕೆ

0

ನವದೆಹಲಿ: ಅದಾನಿ ವಿವಾದ ಸಂಬಂಧ ಮಂಗಳವಾರವೂ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಗದ್ದಲ ಏರ್ಪಟ್ಟ ಪರಿಣಾಮ ಉಭಯ ಸದನಗಳನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ.

ಮಂಗಳವಾರವೂ ಕಪ್ಪು ದಿರಿಸು ಧರಿಸಿಕೊಂಡು ಬಂದಿದ್ದ ವಿಪಕ್ಷಗಳ ಸದಸ್ಯರು, ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆಯೇ, ಸದನದ ಬಾವಿಗೆ ಇಳಿದು ಘೋಷಣೆ ಮೊಳಗಿಸಿದರು.

ಕೆಲ ಸದಸ್ಯರು ಕಾಗದ ಪತ್ರಗಳನ್ನು ಸ್ಪೀಕರ್‌ ಕುರ್ಚಿಯತ್ತ ತೂರಿದರು. ಪರಿಣಾಮ ಕಲಾಪ ಆರಂಭವಾದ ಕೆಲವೇ ನಿಮಿಷಗಳಲ್ಲಿ ಮುಂದೂಡಬೇಕಾಯಿತು.

ರಾಜ್ಯಸಭೆಯಲ್ಲೂ ಅದಾನಿ ಪ್ರಕರಣ ಸಂಬಂಧ ಜಂಟಿ ಸದನ ಸಮಿತಿ ರಚನೆಗೆ ಆಗ್ರಹಿಸಿ ಪ್ರತಿಭಟನೆ ಮುಂದುವರಿಸಿದರು. ಕಲಾಪ ಮುಂದುವರಿಸಲಾಗದೆ 2 ಗಂಟೆಗೆ ಮುಂದೂಡಲಾಯಿತು.

ಹಿಂದಿನ ಲೇಖನ1,573 ನೂತನ ಕೋವಿಡ್ ಪ್ರಕರಣಗಳು ದೃಢ
ಮುಂದಿನ ಲೇಖನಬಿಎಸ್ ವೈ ಮನೆ ಮೇಲೆ ಕಲ್ಲು ತೂರಾಟ: ಶಿಕಾರಿಪುರಕ್ಕೆ ಆರಗ ಜ್ಞಾನೇಂದ್ರ ಭೇಟಿ