ಮನೆ ಸುದ್ದಿ ಜಾಲ ನ.28 ರಂದು ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಲಿ.ನ ಅಮೃತ ಮಹೋತ್ಸವ

ನ.28 ರಂದು ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಲಿ.ನ ಅಮೃತ ಮಹೋತ್ಸವ

0

ಮೈಸೂರು: ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಲಿ.ನ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ನ.28 ರಂದು ಕಲಾಮಂದಿರದಲ್ಲಿ ಆಯೋಜಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಮೈಲಾಕ್ ಅಧ್ಯಕ್ಷ ರಘು ಕೌಟಿಲ್ಯ, 1937ರಲ್ಲಿ ರಾಜಶ್ರೀ ನಾಲ್ವಾಡಿ ಕೃಷ್ಣರಾಜ ಒಡೆಯರ್ ಅವರಿಂದ  ಸಂಸ್ಥೆ ಸ್ಥಾಪಿತಗೊಂಡಿದ್ದು, ಇದೀಗ ಅಮೃತ ಮಹೋತ್ಸವ ಆಚರಣೆ ಮಾಡಿಕೊಳ್ಳುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಎಸ್.ಟಿ. ಸೋಮಶೇಖರ್, ಮುರುಗೇಶ್ ನಿರಾಣಿ ಹಾಗೂ ಎಸ್ ನಾಗರಾಜ್, ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಭಾಗಿಯಾಗಿಲಿದ್ದಾರೆ. ಇದೇ ವೇಳೆ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಿದ ಪ್ರಮುಖರಿಗೆ, ನಿವೃತ್ತ ಅಧಿಕಾರಿ, ಸಿಬ್ಬಂದಿಗೆ ಸನ್ಮಾನ ಮಾಡಲಾಗುತ್ತದೆ ಎಂದು ತಿಳಿಸಿದರು.

ಹಿಂದಿನ ಲೇಖನಡಿಜಿಟಲ್ ಆರೋಗ್ಯ ವಲಯದಲ್ಲಿ ಇಡೀ ಜಗತ್ತಿಗೆ ಕರ್ನಾಟಕ ಮಾದರಿ: ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್
ಮುಂದಿನ ಲೇಖನಚಳಿಗಾಲದಲ್ಲಿ ಒಣ ಖರ್ಜೂರ ತಿನ್ನುವುದರ ಪ್ರಯೋಜನಗಳೇನು ಗೊತ್ತಾ?