ಮನೆ ರಾಜ್ಯ ಅಣ್ಣಾಮಲೈ ಸೆಲ್ಫಿಗಾಗಿ ನೂಕುನುಗ್ಗಲು: ಲಾಠಿ ಬೀಸಿದ ಪೊಲೀಸರು

ಅಣ್ಣಾಮಲೈ ಸೆಲ್ಫಿಗಾಗಿ ನೂಕುನುಗ್ಗಲು: ಲಾಠಿ ಬೀಸಿದ ಪೊಲೀಸರು

0

ರಾಯಚೂರು: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರಿದ್ದ ವೇದಿಕೆಯಲ್ಲಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ನುಗ್ಗಿದ ಕಾರಣ ಪೊಲೀಸರು ಲಾಠಿ ಬೀಸಿದ ಘಟನೆ ರಾಯಚೂರಿನಲ್ಲಿ ನಡೆದಿದೆ.

Join Our Whatsapp Group

ರಾಯಚೂರು- ಯಾದಗಿರಿ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಪರ ಮತಯಾಚನೆಗೆ ಅಣ್ಣಾಮಲೈ ಆಗಮಿಸಿದ್ದಾರೆ. ನಗರದ ಸಂತೋಷ್ ಹಬ್ ಹೊಟೆಲ್‌ ನಲ್ಲಿ ನಡೆಯುತ್ತಿದ್ದ ಬಿಜೆಪಿ‌ ಕಾರ್ಯಕ್ರಮದ ಬಳಿಕ ಅಣ್ಣಾಮಲೈ ಅವರಿಗೆ ವೇದಿಕೆ ಮೇಲೆ ಹೂವಿನ ಹಾರ ಹಾಕಲು ನೂಕು ನುಗ್ಗಲು ಉಂಟಾಗಿದೆ.

ಕಾರ್ಯಕ್ರಮ ಮುಕ್ತಾಯದ ಬಳಿಕ ಕಾರ್ಯಕರ್ತರು ಅಣ್ಣಾಮಲೈ ಜೊತೆ ಸೆಲ್ಫಿ ತೆಗೆದುಕೊಳ್ಳಲು‌ ವೇದಿಕೆ ಮೇಲೆ ಮುಗಿಬಿದ್ದಿದ್ದಾರೆ. ಬಿಜೆಪಿ‌ ಕಾರ್ಯಕರ್ತರು ಹಾಗೂ ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.  ಕಾರ್ಯಕರ್ತರನ್ನ ಚದುರಿಸಲು ವೇದಿಕೆ ಮೇಲೆಯೇ ಪೊಲೀಸರು ಲಾಠಿ ಬೀಸಿದರು.

ಹಿಂದಿನ ಲೇಖನಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್​ ಬೆದರಿಕೆ
ಮುಂದಿನ ಲೇಖನಕುಟುಂಬದ ಒಳಗಿನ ಜಗಳದಿಂದಾಗಿಯೇ ಪ್ರಜ್ವಲ್‌ ರೇವಣ್ಣ ಪ್ರಕರಣ ಹೊರಬಂದಿದೆ: ಡಿ.ಕೆ. ಶಿವಕುಮಾರ್‌