ಮನೆ ಸುದ್ದಿ ಜಾಲ ಎನ್ ಕೌಂಟರ್ ನಲ್ಲಿ ಎಲ್ ಇ ಟಿ ಕಮಾಂಡರ್ ಹತ್ಯೆ

ಎನ್ ಕೌಂಟರ್ ನಲ್ಲಿ ಎಲ್ ಇ ಟಿ ಕಮಾಂಡರ್ ಹತ್ಯೆ

0

ಶ್ರೀನಗರ(Shrinagar): ದಕ್ಷಿಣ ಕಾಶ್ಮೀರದ  ಅನಂತನಾಗ್‌ ಜಿಲ್ಲೆಯ ಸಿರಹ್ಮಾ ಪ್ರದೇಶದಲ್ಲಿ ಶನಿವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಲಷ್ಕರ್‌–ಎ–ತೈಯಬಾದ (ಎಲ್‌ಇಟಿ) ಕಮಾಂಡರ್‌ ನಿಸಾರ್‌ ಅಹ್ಮದ್‌ ದಾರ್‌ ಹತ್ಯೆಯಾಗಿದ್ದಾನೆ.

ಈ ಕುರಿತು ಕಾಶ್ಮೀರ ವಲಯ ಐಜಿಪಿ ವಿಜಯಕುಮಾರ್‌ ಮಾಹಿತಿ ನೀಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ ಹಾಗೂ ಭಾರತೀಯ ಸೇನೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಅಡಗಿದ್ದ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಭದ್ರತಾ ಪಡೆಗಳ ಪ್ರತಿದಾಳಿಗೆ ಎಲ್‌ಇಟಿ ಕಮಾಂಡರ್‌ ಹತ್ಯೆಯಾಗಿದ್ದಾನೆ ಎಂದು ಅವರು ಹೇಳಿದರು.

ಮುನ್ನೆಚ್ಚರಿಕೆ ಕ್ರಮವಾಗಿ ಅನಂತನಾಗ್‌ ಜಿಲ್ಲೆಯ ಕೆಲವೆಡೆ ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಇಬ್ಬರು ಯೋಧರು ಗಾಯಕುಲ್ಗಾಂ ಜಿಲ್ಲೆಯ ಡಿ.ಎಚ್‌.ಪೋರಾದ ಚಾಕಿಸಮದ್‌ ಪ್ರದೇಶದಲ್ಲಿ ಶನಿವಾರ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವಿನ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಗಾಯಗೊಂಡಿದ್ದಾರೆ.

‘ಗಾಯಗೊಂಡವರನ್ನು ರೋಹಿತ್‌ ಯಾದವ್‌, ಅಂಕೇಶ್‌ಕುಮಾರ್‌ ಎಂದು ಗುರುತಿಸಲಾಗಿದ್ದು,ಇಬ್ಬರಿಗೂ ತೊಡೆಯ ಭಾಗದಲ್ಲಿ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ’ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಹಿಂದಿನ ಲೇಖನಬೂಸ್ಟರ್ ಡೋಸ್ ಲಸಿಕೆ ಬೆಲೆ ಬಗ್ಗೆ ತಿಳಿದಿದೆಯೇ?
ಮುಂದಿನ ಲೇಖನಶ್ರೀರಾಮ ಶೋಭಾಯಾತ್ರೆ ವೇಳೆ ಕಲ್ಲು ತೂರಾಟ: 6 ಮಂದಿ ಶಂಕಿತರು ವಶ