ಮನೆ ಅಪರಾಧ ವೇಶ್ಯಾವಾಟಿಕೆ ಅಡ್ಡದ ಮೇಲೆ ದಾಳಿ: ಆರೋಪಿ ಪರಾರಿ

ವೇಶ್ಯಾವಾಟಿಕೆ ಅಡ್ಡದ ಮೇಲೆ ದಾಳಿ: ಆರೋಪಿ ಪರಾರಿ

0

ಮೈಸೂರು(Mysuru): ಮೈಸೂರಿನ ಭುಗತಹಳ್ಳಿ ಹೊರವಲಯದ ವೆಂಕಟಗಿರಿ ಬಡಾವಣೆಯ ಮನೆಯಲ್ಲಿ ಅಭಿ ಎಂಬುವವನು ಯುವತಿಯನ್ನು ಇಟ್ಟುಕೊಂಡು ವೇಶ್ಯಾವೃತಿ ನಡೆಸುತ್ತಿದ್ದನೆಂದು ಮೈಸೂರು ಮಹಿಳಾ ಪೊಲೀಸ್ ಠಾಣೆ ಮೊ.ನಂ.55/2022 ಕಲಾಂ 3,4,5,6,7, ಐ.ಟಿ.ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.


ಮಹಾಜಾರ್ ಪಂಚಾಯ್ತುದಾರರಾಗಿ ಕರುನಾಡ ರಕ್ಷಣಾ ವೇದಿಕೆ ಸದ್ಯಸರಾದ ಬಸವರಾಜು, ಸದಸ್ಯರಾದ ಸಂಜಯ್ ಅವರ ಜೊತೆ ಗುಡಿ ಪೊಲೀಸರು ದಾಳಿಮಾಡಿ ವೇಶ್ಯಾವಾಟಿಕೆ ಸ್ಥಳದಲ್ಲಿದ್ದ ಇಬ್ಬರು ಗ್ರಾಹಕ ಶ್ರೀಧರ್ ರೆಡ್ಡಿ, ಸಂದೀಪ್ ಮತ್ತು ಒಬ್ಬ ಸಂತ್ರಸ್ಥ ಯುವತಿಯನ್ನು ರಕ್ಷಿಸಿದ್ದಾರೆ ಹಾಗೂ ಅರೋಪಿ ಪರಾರಿಯಾಗಿರುತ್ತಾನೆ.
ಈ ದಾಳಿಯಲ್ಲಿ ಮೈಸೂರು ಗ್ರಾಮಾಂತರ ವಿಭಾಗದ ಪೊಲೀಸ್ ಉಪ ಅಧೀಕ್ಷಕರಾದ ಎಮ್,ಎಸ್, ಪೂರ್ಣಚಂದ್ರ ತೇಜಸ್ವಿ ಅವರ ಮಾರ್ಗದರ್ಶನದಲ್ಲಿ ಮಹಿಳಾ ಠಾಣಾ ನಿರೀಕ್ಷಕರಾದ ಮಮತಾ ಮತ್ತು ಸಿಬ್ಬಂದಿಗಳಾದ ರಾಮ್ ಪ್ರಸಾದ್, ಸುನೀಲ್, ಹರೀಶ್ ಕುಮಾರ್, ದ್ರಾಕ್ಷಾಯಿಣಿ, ಚಾಲಕರಾದ ಚಿಕ್ಕಲಿಂಗಯ್ಯ ಭಾಗವಸಿದ್ದರು ಎಂದು ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದಿನ ಲೇಖನಕರ್ನಾಟಕಕ್ಕೆ ನದಿ ನೀರು ಹರಿಸುವುದನ್ನು ಪುನರ್ ಪರಿಶೀಲಿಸಬೇಕಾಗುತ್ತದೆ: ಮಹಾರಾಷ್ಟ್ರ ಸಚಿವ
ಮುಂದಿನ ಲೇಖನಹಿರಿಯ ಗಮಕ ಕಲಾವಿದ, ಪದ್ಮಶ್ರೀ ಪುರಸ್ಕೃತ ಎಚ್.ಆರ್.ಕೇಶವಮೂರ್ತಿ ನಿಧನ