Saval TV on YouTube
ಬೀದರ್(Beedar): ಗುಡಿಸಲಿಗೆ ಬೆಂಕಿ ಹೊತ್ತಿಕೊಂಡಿದ್ದು, ಓರ್ವ ವ್ಯಕ್ತಿ ಸಜೀವ ದಹನವಾಗಿರುವ ಘಟನೆ ಬೀದರ್’ ನ ಬಾಲ್ಕಿ ತಾಲ್ಲೂಕಿನ ಹರನಾಳ ಗ್ರಾಮದ ಜಮೀನಿನಲ್ಲಿ ನಡೆದಿದೆ.
ಗುಡಿಸಲಿನಲ್ಲಿ ಮಲಗಿದ್ದ ಜಗನ್ನಾಥ ಹಲಗೆ (60) ಸಜೀವ ದಹನವಾಗಿದ್ದಾರೆ.
ಜಗನ್ನಾಥ್ ರಕ್ಷಿಸಲು ಹೋದ ಮಾರುತಿಗೆ ಗಾಯಗಳಾಗಿವೆ.
ಜಗನ್ನಾಥ್ ಮತ್ತು ಮಾರುತಿ ರಾತ್ರಿ ಗುಡಿಸಲಿನಲ್ಲಿ ಪಾರ್ಟಿ ಮಾಡಿದ್ದರು. ತಡರಾತ್ರಿ ಪಾರ್ಟಿ ಮಾಡಿ ಗುಡಸಲಿನಲ್ಲಿ ಮಲಗಿದ್ದರು. ಈ ವೇಳೆ ಬೆಂಕಿ ಕಾಣಿಸಿಕೊಂಡು ಈ ಅವಘಡ ಸಂಭವಿಸಿದೆ.
ಈ ಕುರಿತು ಭಾಲ್ಕಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














