ಮನೆ ರಾಜ್ಯ ಬೀದರ್: ಗುಡಿಸಲಿಗೆ ಬೆಂಕಿ- ಓರ್ವ ವ್ಯಕ್ತಿ ಸಜೀವ ದಹನ

ಬೀದರ್: ಗುಡಿಸಲಿಗೆ ಬೆಂಕಿ- ಓರ್ವ ವ್ಯಕ್ತಿ ಸಜೀವ ದಹನ

0

ಬೀದರ್(Beedar):  ಗುಡಿಸಲಿಗೆ ಬೆಂಕಿ ಹೊತ್ತಿಕೊಂಡಿದ್ದು, ಓರ್ವ ವ್ಯಕ್ತಿ ಸಜೀವ ದಹನವಾಗಿರುವ ಘಟನೆ ಬೀದರ್’ ನ ಬಾಲ್ಕಿ ತಾಲ್ಲೂಕಿನ ಹರನಾಳ ಗ್ರಾಮದ ಜಮೀನಿನಲ್ಲಿ ನಡೆದಿದೆ. 

ಗುಡಿಸಲಿನಲ್ಲಿ ಮಲಗಿದ್ದ ಜಗನ್ನಾಥ ಹಲಗೆ (60) ಸಜೀವ ದಹನವಾಗಿದ್ದಾರೆ.

ಜಗನ್ನಾಥ್  ರಕ್ಷಿಸಲು ಹೋದ ಮಾರುತಿಗೆ ಗಾಯಗಳಾಗಿವೆ.

ಜಗನ್ನಾಥ್ ಮತ್ತು ಮಾರುತಿ ರಾತ್ರಿ ಗುಡಿಸಲಿನಲ್ಲಿ  ಪಾರ್ಟಿ ಮಾಡಿದ್ದರು. ತಡರಾತ್ರಿ ಪಾರ್ಟಿ ಮಾಡಿ ಗುಡಸಲಿನಲ್ಲಿ ಮಲಗಿದ್ದರು. ಈ ವೇಳೆ ಬೆಂಕಿ ಕಾಣಿಸಿಕೊಂಡು ಈ ಅವಘಡ ಸಂಭವಿಸಿದೆ.

ಈ ಕುರಿತು ಭಾಲ್ಕಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಹೊಸ ವರ್ಷಾಚರಣೆಗೆ ಪೂರೈಸಲು ಸಂಗ್ರಹಿಸಿದ್ದ ಡ್ರಗ್ಸ್ ಜಪ್ತಿ: 8 ಮಂದಿ ಬಂಧನ
ಮುಂದಿನ ಲೇಖನನಮ್ಮಲ್ಲಿ ಯಾವುದೇ ಹುದ್ದೆ ಮಾರಾಟಕ್ಕಿಲ್ಲ: ಬಿಜೆಪಿ