ಮನೆ ರಾಜ್ಯ ಬಿಜೆಪಿ ಜನೋತ್ಸವದ ದಿನಾಂಕ ಮರುನಿಗದಿ: ಸೆ.10ರಂದು ಸಮಾವೇಶ

ಬಿಜೆಪಿ ಜನೋತ್ಸವದ ದಿನಾಂಕ ಮರುನಿಗದಿ: ಸೆ.10ರಂದು ಸಮಾವೇಶ

0

ಬೆಂಗಳೂರು(Bengaluru): ರಾಜ್ಯ ಸರ್ಕಾರದ ಮೂರು ವರ್ಷದ ಸಾಧನಾ ಸಮಾವೇಶವನ್ನು ಸೆ.10ಕ್ಕೆ ಮರುನಿಗದಿಗೊಳಿಸಲಾಗಿದೆ.

ಸಮಾವೇಶ ಆಯೋಜನೆಯ ಸಂಬಂಧ ಬಿಜೆಪಿ ಸಾಕಷ್ಟು ಗೊಂದಲಕ್ಕೆ ಸಿಲುಕಿದ್ದು, ಭಾನುವಾರಕ್ಕೆ ನಿಗದಿ ಮಾಡಿದ್ದ ದಿನಾಂಕವನ್ನು ಇದೀಗ ಮತ್ತೆ ಶನಿವಾರಕ್ಕೆ ಮರುನಿಗದಿಗೊಳಿಸಿ ಬದಲಾಯಿಸಲಾಗಿದೆ.

ಸಚಿವ ಉಮೇಶ್ ಕತ್ತಿ ನಿಧನದ ಕಾರಣ ದೊಡ್ಡಬಳ್ಳಾಪುರದಲ್ಲಿ ನಡೆಸಲು ಉದ್ದೇಶಿಸಿದ್ದ ‘ಜನೋತ್ಸವ’ವನ್ನು ಸೆಪ್ಟೆಂಬರ್ 11ಕ್ಕೆ ಮುಂದೂಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ‌, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಳೆದ ರಾತ್ರಿಯಷ್ಟೇ ಪ್ರಕಟಿಸಿದ್ದರು.

ಇದಾದ ನಂತರ, ಸರಿರಾತ್ರಿ ಮತ್ತೆ ನಿರ್ಧಾರ ಬದಲಿಸಿರುವ ರಾಜ್ಯ ಬಿಜೆಪಿ ನಾಯಕರು ಸಮಾವೇಶವನ್ನು ಭಾನುವಾರದ ಬದಲು ಶನಿವಾರವೇ ನಡೆಸುವ ತೀರ್ಮಾನ ಪ್ರಕಟಿಸಿದ್ದಾರೆ.

ಹಿಂದಿನ ಲೇಖನತಾಯಿಯ ಮೇಲೆ ಹಲ್ಲೆ ಮಾಡಿದ ತಂದೆಯನ್ನು ಕೊಂದ ಮಗ
ಮುಂದಿನ ಲೇಖನಪ್ರವೀಣ್ ಹತ್ಯೆ ಪ್ರಕರಣ: ಎಸ್’ಡಿಪಿಐ ಮುಖಂಡನ ಮನೆ ಮೇಲೆ ಎನ್ಐಎ ದಾಳಿ