ಮನೆ ರಾಜ್ಯ ಅಪಘಾತ: ಜೆಡಿಎಸ್‌ ಮುಖಂಡ ಸುಧಾಕರ್‌ ಶೆಟ್ಟಿ ಅಪಾಯದಿಂದ ಪಾರು

ಅಪಘಾತ: ಜೆಡಿಎಸ್‌ ಮುಖಂಡ ಸುಧಾಕರ್‌ ಶೆಟ್ಟಿ ಅಪಾಯದಿಂದ ಪಾರು

0

ಮಂಗಳೂರು (Mangalore)-ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘದ (ಎಫ್‌ಕೆಸಿಸಿಐ) ಮಾಜಿ ಅಧ್ಯಕ್ಷ, ಜೆಡಿಎಸ್‌ ಮುಖಂಡ ಎಸ್.ಸುಧಾಕರ್ ಶೆಟ್ಟಿ ಅವರ ಕಾರು ಶನಿವಾರ ರಾತ್ರಿ ಅಪಘಾತಕ್ಕೀಡಾಗಿದ್ದು, ಅವರು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.

ಅಪಘಾತದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಶೆಟ್ಟಿ, ತನ್ನ ಸಹಾಯಕರೊಂದಿಗೆ ಬೆಂಜ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ರಾತ್ರಿ 11.30ರ ಸುಮಾರಿಗೆ ಸುಳ್ಯ-ಪುತ್ತೂರು ರಸ್ತೆಯ ಕಾವು ಗ್ರಾಮದ ಬಳಿ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು 100 ಅಡಿ ಆಳದ ಕಂದಕಕ್ಕೆ ಉರುಳಿತು. ಶ್ರೀ ಜಾತಿಗೇಶ್ವರ ಸ್ವಾಮಿ, ಶೃಂಗೇರಿ ಶಾರದಾಂಬೆ, ಚಾಮುಂಡೇಶ್ವರಿಯ ಆಶೀರ್ವಾದ ಹಾಗೂ ಹಿರಿಯರು, ಸ್ನೇಹಿತರ ಆಶೀರ್ವಾದ ಹಾಗೂ ಶುಭ ಹಾರೈಕೆಗಳಿಂದಾಗಿ ಅಪಘಾತದಲ್ಲಿ ಬದುಕುಳಿದಿದ್ದೇನೆ ಎಂದಿದ್ದಾರೆ.

ಶೆಟ್ಟಿ ಮೈಸೂರಿನ ನಿವಾಸಿ ಜೆಡಿಎಸ್ ಮುಖಂಡ ಮತ್ತು ಜ್ಞಾನಸರೋವರ ಇಂಟರ್‌ನ್ಯಾಶನಲ್ ರೆಸಿಡೆನ್ಶಿಯಲ್ ಸ್ಕೂಲ್ ಮೈಸೂರು (JIRSM) ಅಧ್ಯಕ್ಷರಾಗಿದ್ದಾರೆ.

ಹಿಂದಿನ ಲೇಖನಕೋಡಿಹಳ್ಳಿ ಚಂದ್ರಶೇಖರ್‌ ಜೆಡಿಎಸ್‌ ಕಾರ್ಯಕರ್ತರಿಂದ ಮಸಿ ದಾಳಿ: 8 ಮಂದಿ ಬಂಧನ
ಮುಂದಿನ ಲೇಖನದೇವನೂರು ಮಹಾದೇವ ಅವರ ಮನವಿ ಕುರಿತು ಸರ್ಕಾರ ನಿರ್ಧರಿಸಲಿದೆ: ರೋಹಿತ್ ಚಕ್ರತೀರ್ಥ