ಮನೆ ರಾಜ್ಯ ಚಾಮರಾಜನಗರ: ಎರಡು ಅನಾಥ ಶವಗಳ ಅಂತ್ಯ ಸಂಸ್ಕಾರ ನೆರವೇರಿಸಿದ ಪೊಲೀಸರು

ಚಾಮರಾಜನಗರ: ಎರಡು ಅನಾಥ ಶವಗಳ ಅಂತ್ಯ ಸಂಸ್ಕಾರ ನೆರವೇರಿಸಿದ ಪೊಲೀಸರು

0

ಚಾಮರಾಜನಗರ(Chamarajanagar): ಜಿಲ್ಲೆಯ ಹನೂರು ತಾಲ್ಲೂಕಿನ ಮಹದೇಶ್ವರ ಬೆಟ್ಟದ ವ್ಯಾಪ್ತಿಯಲ್ಲಿ ಮೃತಪಟ್ಟಿದ್ದ ಇಬ್ಬರು ಅಪರಿಚಿತರ ಅಂತ್ಯಸಂಸ್ಕಾರವನ್ನು ಪೊಲೀಸರು ನೆರವೇರಿಸಿ, ಮಾನವೀಯತೆ ಮೆರೆದಿದ್ದಾರೆ.

ಮಹದೇಶ್ವರ ಬೆಟ್ಟದಲ್ಲಿ ಇದೇ 7ರಂದು ಡಿ.ಮಾದರಿ ಕುಟೀರದ ಕೊಠಡಿ ಸಂಖ್ಯೆ 13ರ ಬಳಿ 35 ವರ್ಷದ ಅಪರಿಚಿತ ಪುರುಷನ ಶವ ಕಂಡು ಬಂದಿತ್ತು. ಆರೋಗ್ಯ ಕೇಂದ್ರದ ಪಕ್ಕದಲ್ಲಿ ಹೊಸದಾಗಿ ನಿರ್ಮಾಣ ಮಾಡಲಾಗಿರುವ ಹೋಟೆಲ್ ಮುಂಭಾಗ ಇದೇ 11ರಂದು ಸುಮಾರು 50 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು.

ಈ ಸಂಬಂಧ ಬೆಟ್ಟದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಗರದ ಹೊರವಲಯದ ಯಡಬೆಟ್ಟದಲ್ಲಿರುವ ವೈದ್ಯಕೀಯ ಕಾಲೇಜಿನ ಶವಾಗಾರದಲ್ಲಿ ಮೃತದೇಹಗಳನ್ನು ಇಡಲಾಗಿತ್ತು.

ಮೃತಪಟ್ಟವರ ವಾರಸುದಾರರು ಪತ್ತೆಯಾಗದೇ ಇರುವುದರಿಂದ ಶವ ಪರೀಕ್ಷೆಯ ಬಳಿಕ, ನಗರಸಭೆಗೆ ಸೇರಿದ ಜಾಗದಲ್ಲಿ ಬೆಟ್ಟದ ಠಾಣೆಯ ಹೆಡ್ ಕಾನ್‌’ಸ್ಟೆಬಲ್‌ ಮಹೇಶ್ ಬಿ.ಎಂ ಹಾಗೂ ಸಿಬ್ಬಂದಿ ಬಸವರಾಜೇಂದ್ರ ಪಿ. ಮತ್ತು ಸಂಜು.ಎಚ್ ಅವರು ಅಂತ್ಯಸಂಸ್ಕಾರ ನೆರವೇರಿಸಿದರು.

ಹಿಂದಿನ ಲೇಖನಮುರುಘಾ ಶ್ರೀ ವಿರುದ್ಧ ಪಿತೂರಿ: ಸೌಭಾಗ್ಯ ಬಸವರಾಜನ್ ಪೊಲೀಸರ ವಶಕ್ಕೆ
ಮುಂದಿನ ಲೇಖನಭಯೋತ್ಪಾದಕರಿಗೆ ಬೆಂಬಲ ಕೊಡುವ ಮೂಲಕ ಕಾಂಗ್ರೆಸ್’ನಿಂದ ಮತಬ್ಯಾಂಕ್ ರಾಜಕೀಯ: ನಳಿನ್ ಕುಮಾರ್ ಕಟೀಲ್