ಮನೆ ಸುದ್ದಿ ಜಾಲ ಇಬ್ರಾಹಿಂ ಸುತಾರ್ ನಿಧನ : ಗಣ್ಯರಿಂದ ಸಂತಾಪ

ಇಬ್ರಾಹಿಂ ಸುತಾರ್ ನಿಧನ : ಗಣ್ಯರಿಂದ ಸಂತಾಪ

0

ಬೆಂಗಳೂರುಕನ್ನಡದ ಕಬೀರ ಎಂದೇ ಖ್ಯಾತಿ ಪಡೆದಿದ್ದ ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ್ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಕೋಟಾ ಶ್ರೀನಿವಾಸ್ ಪೂಜಾರಿ ಟ್ವೀಟ್ ಮಾಡಿ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ್ ರವರು ಹೃದಯಾಘಾತದಿಂದ ನಿಧನರಾದ ಸುದ್ಧಿ ಕೇಳಿ ಬಹಳ ಬೇಸರವಾಯಿತು. ಧರ್ಮ ಧರ್ಮಗಳೊಂದಿಗೆ ಉತ್ತಮ ಬೆಸುಗೆ ಹೊಂದಲು ಅವರು ಪಟ್ಟ ಶ್ರಮ ಅನೇಕ. ಭಜನಾ ಕೀರ್ತನೆಗಳ ಮೂಲಕ ಭಾರತದ ಮೂಲತತ್ವದ ಪ್ರಚಾರ ಮಾಡುತ್ತಿದ್ದ ಸುತಾರ್ ತಾತನಿಗೆ ಭಾವಪೂರ್ಣ ಶ್ರದ್ಧಾಂಜಲಿ ಎಂದಿದ್ದಾರೆ.

ಇದನ್ನೂ ಓದಿ… ಸರ್ವಧರ್ಮ ಸಮನ್ವಯದ ಪ್ರವಚನಕಾರ ಇಬ್ರಾಹಿಂ ಸುತಾರ ಇನ್ನಿಲ್ಲ
ಪದ್ಮಶ್ರೀ ಪುರಸ್ಕೃತರಾದ ಇಬ್ರಾಹಿಂ ಸುತಾರ ಇನ್ನಿಲ್ಲವೆಂಬು ತುಂಬಾ ನೋವಿನ ವಿಷಯವಾಗಿದೆ. ಶ್ರೀಯುತರ ಆತ್ಮಕ್ಕೆ ಸದ್ಗತಿ ಸಿಗಲೆಂದು ಪ್ರಾರ್ಥಿಸುತ್ತೇನೆ, ತಮ್ಮ ಜೀವನದುದ್ದಕ್ಕೂ ಜಾತಿ ಮತ ಪಂಥಗಳೆಲ್ಲಕ್ಕಿಂತ ಮನುಷ್ಯತ್ವ ,ಸಹೋದರತೆ ಸೌಹಾರ್ದತೆ ಮುಖ್ಯ ಎಂದು ಸಾರಿದ್ದರು ‌‌ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ವೇದ, ವಚನ ಮತ್ತು ಸೂಫಿ ಪರಂಪರೆ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಹಾಗೂ ಭಜನೆ, ಪ್ರವಚನಗಳಿಂದ “ಕನ್ನಡದ ಕಬೀರ” ಎಂದು ಹೆಸರುವಾಸಿಯಾಗಿದ್ದ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ್ ಅವರ ಅಗಲಿಕೆ ತುಂಬಲಾರದ ನಷ್ಟ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಸಂತಾಪ ಸೂಚಿಸಿದ್ದಾರೆ.

ಹಿಂದಿನ ಲೇಖನ2023ರ ವಿಧಾನಸಭೆ ಚುನಾವಣೆ: ಶೀಘ್ರದಲ್ಲೇ ಬಿ.ಎಸ್. ಯಡಿಯೂರಪ್ಪ ಅವರಿಂದ ರಾಜ್ಯ ಪ್ರವಾಸ
ಮುಂದಿನ ಲೇಖನಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವಗಳಂದು ನ್ಯಾಯಾಲಯಗಳಲ್ಲಿ ಅಂಬೇಡ್ಕರ್ ಫೋಟೋ ಕಡ್ಡಾಯ: ಹೈಕೋರ್ಟ್ ತೀರ್ಮಾನ