ಮನೆ ರಾಜಕೀಯ ಕಾಂಗ್ರೆಸ್ ರಕ್ತದಲ್ಲಿಯೇ ಹಿಂದೂ ವಿರೋಧಿ ನೀತಿ ಇದೆ: ಪ್ರತಾಪ್ ಸಿಂಹ

ಕಾಂಗ್ರೆಸ್ ರಕ್ತದಲ್ಲಿಯೇ ಹಿಂದೂ ವಿರೋಧಿ ನೀತಿ ಇದೆ: ಪ್ರತಾಪ್ ಸಿಂಹ

0

ಮೈಸೂರು(Mysuru): ಕಾಂಗ್ರೆಸ್​ ಹಿಂದಿನಿಂದಲೂ ಹಿಂದೂಗಳ ಭಾವನೆಗೆ ಬೆಲೆ ಕೊಟ್ಟವರಲ್ಲ. ನೆಹರು ಕಾಲದಿಂದಲೂ ಅವರು ಹಿಂದೂ ವಿರೋಧಿ ಮಾಡಿಕೊಂಡೇ ಬಂದರು. ಅದನ್ನೇ ಇವರು ಅನುಸರಿಸುತ್ತಿದ್ದಾರೆ. ಕಾಂಗ್ರೆಸ್ ರಕ್ತದಲ್ಲಿಯೇ ಹಿಂದೂ ವಿರೋಧಿ ನೀತಿ ಎಂದು ಸಂಸದ ಪ್ರತಾಪ್ ಸಿಂಹ ಹರಿಹಾಯ್ದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದರು.

ಕಾಂಗ್ರೆಸ್​ನವರು ತಮ್ಮ ಹಿಂದೂ ವಿರೋಧಿ ಧೋರಣೆಯನ್ನು ಆಗಾಗ ವ್ಯಕ್ತಪಡಿಸುತ್ತಾರೆ. ಹಿಂದೆ ಸಿದ್ದರಾಮಯ್ಯ ಅವರು ಹಿಂದೂ ವಿರೋಧಿ ಧೋರಣೆ ಅನುಸರಿಸಿದ್ದರು. ಅಲ್ಲದೆ ಸೋನಿಯಾ ಗಾಂಧಿ ಮತ್ತು ಮನಮೋಹನ್​ ಸಿಂಗ್​ ಅವರು ಹಿಂದೂ ವಿರೋಧಿ ಧೋರಣೆ ಹೊಂದಿದ್ದರು ಎಂದು ಆರೋಪಿಸಿದರು.

ಇದೀಗ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಈ ರೀತಿಯ ಹಿಂದೂ ಪದ ಪರ್ಷಿಯನ್​ ಭಾಷೆಯಿಂದ ಬಂದಿದ್ದು, ಅದು ಅಶ್ಲೀಲ ಎಂದು ಹೇಳಿದ್ದರು. ಹೀಗೆ ಕಾಂಗ್ರೆಸ್​ ನಾಯಕರು ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡುತ್ತ ಬಂದಿದ್ದಾರೆ. ಕರ್ನಾಟಕದ ಜನತೆ ಮತ್ತೆ ಕಾಂಗ್ರೆಸ್​​ಗೆ ಅಧಿಕಾರ ಕೊಟ್ಟರೆ ತಾಲಿಬಾನಿ ಸರ್ಕಾರ ಬರುತ್ತದೆಯೋ ಹೊರತು ಜಾತ್ಯಾತೀತ ಸರ್ಕಾರ ಬರಲ್ಲ ಎಂದು ವಾಗ್ದಾಳಿ ನಡೆಸಿದರು.

ಹಿಂದಿನ ಲೇಖನಟಿ20 ವಿಶ್ವಕಪ್: ಭಾರತಕ್ಕೆ ಸೋಲು –  ಫೈನಲ್’ಗೆ ಲಗ್ಗೆ ಇಟ್ಟ ಇಂಗ್ಲೆಂಡ್
ಮುಂದಿನ ಲೇಖನನಕ್ಕು ನಲಿ