ಸಂಗೀತ ಸಾಹಿತ್ಯ ಸಮಲೋಚನಿ
ಶಾರದೇ ಸರಸ್ವತಿ ದಯೆ ತೋರುನಿ ।।
ಸರಿಗಮ ಪದನಿಸ
ಸಪ್ತಸ್ವರಗಳ ನಾದವಾಹಿನಿ ।
ಚತುರ್ಮುಖ ಬ್ರಹ್ಮನ ಹೃದಯ ನಿವಾಸಿನಿ ।
ತುಂಗಾ ಸಲಿಲ ತೀರ ವಿಹಾರಿಣಿ
ಸಾರಂಗ ವೀಣಾ ನಾದೋಪಾಸಿನಿ ।।
ಸಾವಿತ್ರಿ ಗಾಯತ್ರಿ ಸರಸ್ವತಿಯೆಂದು
ಭಜಿಸಿದರಮ್ಮ ಮುನಿಗಳು ಮುಂದು ।
ಆದಿ ಶಂಕರರು ಅರ್ಚಿಸಲೆಂದು
ನೆಲೆಸಿಡೇ ನೀ ಶೃಂಗೇರಿಗೆ ಬಂದು ।।
ನವರಾತ್ರಿಯಲ್ಲಿ ನಿತ್ಯವೂ ನಿನಗೆ
ನವನವ ಅಲಂಕಾರ ಭೂಷಣ ತಾಯೆ ||
ಕಾಣುವ ಕಣ್ಣಿಗೆ ತೃಪ್ತಿಯು ಇಲ್ಲ
ಸೊಬಗನು ಬಣ್ಣಿಸೆ ಮಾತೆ ಇಲ್ಲ ।।