ಮನೆ ರಾಜಕೀಯ ನಂಜನಗೂಡು ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್’ಗಾಗಿ ಅರ್ಜಿ ಸಲ್ಲಿಸಿದ ಡಾ.ಎಚ್.ಸಿ.ಮಹದೇವಪ್ಪ

ನಂಜನಗೂಡು ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್’ಗಾಗಿ ಅರ್ಜಿ ಸಲ್ಲಿಸಿದ ಡಾ.ಎಚ್.ಸಿ.ಮಹದೇವಪ್ಪ

0

ಮೈಸೂರು(Mysuru): ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ನಂಜನಗೂಡು ಕ್ಷೇತ್ರದಿಂದ ಕಣಕ್ಕಿಳಿಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಟಿಕೆಟ್’ಗಾಗಿ ಅರ್ಜಿ ಸಲ್ಲಿಸಿದ್ದಾರೆ.

ನಂಜನಗೂಡಿನಲ್ಲಿ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಹೈಕಮಾಂಡ್‌ಗೆ ಈಗಾಗಲೇ ನಾನು ಸೇರಿ ಒಟ್ಟು ಮೂವರು ಅರ್ಜಿ ಹಾಕಿದ್ದೇವೆ. ಅದರಲ್ಲಿ ಈ ಸ್ಥಳದಲ್ಲಿ ಇರುವ ವ್ಯಕ್ತಿಗೆ ಎಂದಿಗೂ ಟಿಕೆಟ್ ಸಿಗುವುದಿಲ್ಲ. ಟಿಕೆಟ್ ಸಿಕ್ಕರೂ ಸೋಲುವುದು ಖಚಿತ ಎಂಬುದು ಹೈಕಮಾಂಡ್‌ಗೆ ಮನವರಿಕೆಯಾಗಿದೆ ಎಂದು ಪರೋಕ್ಷವಾಗಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿಗೆ ಟಾಂಗ್ ನೀಡಿದರು.

ನಾನು ಎ ಸ್ಥಾನದಲ್ಲಿದ್ದೇನೆ, ಮಾಜಿ ಸಂಸದರು ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಆರ್ ನಾರಾಯಣ್ ಬಿ ಸ್ಥಾನದಲ್ಲಿದ್ದಾರೆ. ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಿ ಮುಂದಿನ ದಿನಗಳಲ್ಲಿ ನಂಜನಗೂಡು ಕ್ಷೇತ್ರವನ್ನು ಅಭಿವೃದ್ಧಿಪಡಿಸುವೆ ಎಂದು ತಿಳಿಸಿದರು.

ಮುಂದಿನ ಸಾರ್ವತ್ರಿಕ ಚುನಾವಣೆಗೆ ನಿಮ್ಮ ನೆಚ್ಚಿನ ನಾಯಕರೇ ಈ ಕ್ಷೇತ್ರದಲ್ಲಿ ಅಭ್ಯರ್ಥಿಯಾಗುತ್ತಾರೆ. ನನ್ನ ಬೆಂಬಲಿಗರಾದ ನೀವು ಇಟ್ಟಿರುವ ಆಸೆಯನ್ನು ಈಡೇರಿಸುತ್ತೇನೆ. ಈಗಾಗಲೇ ಹೈಕಮಾಂಡ್‌ಗೆ ಎಲ್ಲ ಕ್ಷೇತ್ರದ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ನಾನೂ ಕೂಡ ನಂಜನಗೂಡು ಮೀಸಲು ವಿಧಾನಸಭೆ ಕ್ಷೇತ್ರದಿಂದ ಅಭ್ಯರ್ಥಿಯಾಗಲು ಅರ್ಜಿ ಹಾಕಿದ್ದೇನೆ ಎಂದರು.

ಹಿಂದಿನ ಲೇಖನಮತಪಟ್ಟಿ ಪರಿಷ್ಕರಣೆ ವಿವಾದ: ಪ್ರಕರಣದ ಸಮಗ್ರ ತನಿಖೆಗೆ ಸೂಚನೆ: ಸಿಎಂ ಬೊಮ್ಮಾಯಿ
ಮುಂದಿನ ಲೇಖನಮುಡಾವನ್ನು ದಿವಾಳಿ ಮಾಡಲು ಹೊರಟಿದ್ದಾರೆ: ಎಂಎಲ್’ಸಿ ಸಿ.ಎನ್ ಮಂಜೇಗೌಡ ಆರೋಪ