ನೆಲಮಂಗಲ(ಬೆಂಗಳೂರು ಗ್ರಾಮಾಂತರ): ಬಹುಭಾಷಾ ತಾರೆ ಲೀಲಾವತಿ ಅವರ ಪಾರ್ಥಿವ ಶರೀರವನ್ನು ಇಲ್ಲಿನ ಅಂಬೇಡ್ಕರ್ ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದ್ದು, ಅಪಾರ ಸಂಖ್ಯೆಯಲ್ಲಿ ಹರಿದುಬರುತ್ತಿರುವ ಅಭಿಮಾನಿಗಳು ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ನೆಚ್ಚಿನ ನಟಿಗೆ ಅಭಿಮಾನಿಗಳು ಕಣ್ಣೀರಿನ ವಿದಾಯ ಹೇಳುತ್ತಿದ್ದಾರೆ.
ಸೋಲದೇವನಹಳ್ಳಿ, ಮೆಲ್ಲಹಳ್ಳಿ, ನೆಲಮಂಗಲ, ದಾಬಸ್ಪೇಟೆ ಸೇರಿದಂತೆ ಹತ್ತಾರು ಹಳ್ಳಿಗಳ ಗ್ರಾಮಸ್ಥರು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಲೀಲಾವತಿ ಅವರ ನಟನೆ, ಸಾಮಾಜಿಕ ಕಾರ್ಯ, ಪ್ರಾಣಿಗಳ ಮೇಲಿನ ಪ್ರೀತಿ ನೆನಪಿಸಿಕೊಂಡು ಭಾವುಕರಾಗುತ್ತಿದ್ದಾರೆ. ಲೀಲಾವತಿ ಅಮ್ಮನ ಹೋರಾಟದ ಬದುಕನ್ನು ನೆನದು ಕಂಬನಿ ಮಿಡಿಯುತ್ತಿದ್ದಾರೆ.
ತಾಯಿ ಪಾರ್ಥಿವ ಶರೀರದ ಪಕ್ಕದಲ್ಲೇ ಕುಳಿತಿರುವ ವಿನೋದ್ ರಾಜ್ ಅವರ ಕಣ್ಣೀರು ಆರುತ್ತಿಲ್ಲ. ಬಂದ ಅಭಿಮಾನಿಗಳು ಸಂತೈಸಿದರೂ ಗಳಗಳನೆ ಅಳುತ್ತಿದ್ದಾರೆ. ಬೆಳಿಗ್ಗೆ 5ರಿಂದಲೇ ಅಭಿಮಾನಿಗಳು ಮೈದಾನದತ್ತ ಬರಲು ಆರಂಭಿಸಿದ್ದು ಕಾಲಕಳೆದಂತೆ ಸರದಿ ದೊಡ್ಡದಾಗುತ್ತಿದೆ.
ನಟಿ ಲೀಲಾವತಿ ಅವರ ಪಾರ್ಥಿವ ಶರೀರವನ್ನು ನೆಲಮಂಗಲದ ಅಂಬೇಡ್ಕರ್ ಮೈದಾನದಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣಕ್ಕೆ ಕೊಂಡೊಯ್ಯಲಾಗುತ್ತದೆ.
ನೆಲಮಂಗಲ ಕ್ರಾಸ್, ದಾಸನಪುರ, ಮಾಕಳಿ, ನಾಗಸಂದ್ರ, ದಾಸರಹಳ್ಳಿ, ಜಾಲಹಳ್ಳಿ, ಪೀಣ್ಯ, ಗೊರಗುಂಟೆಪಾಳ್ಯ, ಯಶವಂತರಪುರ ಮಾರ್ಗವಾಗಿ ಆಂಬುಲೆನ್ಸ್ ರವೀಂದ್ರ ಕಲಾಕ್ಷೇತ್ರಕ್ಕೆ ತೆರಳಲಿದೆ.
ಹ್ಯಾಪಿ ಮದರ್ಸ್ ಡೇ…….
ಹ್ಯಾಪಿ ಮದರ್ಸ್ ಡೇ…..
ಅಕ್ಷಯ ತೃತೀಯದಂದು ಚಿನ್ನ ಬೆಳ್ಳಿ ಮಾರಾಟದಲ್ಲಿ ಹೊಸ ದಾಖಲೆ..!
ಹೆಚ್ಚು ಹೊತ್ತು ಮೆಟ್ರೋದಲ್ಲಿ ಇದ್ದ ಕಾರಣ ದಂಡ ವಿಧಿಸಲಾಗಿದೆ…
ಲೆಮನ್ ಜ್ಯೂಸ್ ಆರೋಗ್ಯಕ್ಕೆ ಉತ್ತಮ..!
ಜೈಲಿನಲ್ಲಿರುವವರು ಮತ ಚಲಾಯಿಸಬಹುದೇ ?
ಉದ್ಯೋಗ ಅವಕಾಶ, ಆನ್ಲೈನಲ್ಲಿ ಅರ್ಜಿ ಸಲ್ಲಿಸಿ….
ಯಾಕೆ ಮೇ 8ನ್ನ ವಿಶ್ವ ರೆಡ್ ಕ್ರಾಸ್ ದಿನ ಎಂದು ಆಚರಿಸಲಾಗುತ್ತದೆ
ಬೆಂಗಳೂರಿನಲ್ಲಿ ಭೂಕುಸಿತ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.