ಮನೆ ಅಪರಾಧ ಅಗ್ನಿ ಅವಘಡ : 35 ಕುರಿಗಳು ಸಜೀವ ದಹನ

ಅಗ್ನಿ ಅವಘಡ : 35 ಕುರಿಗಳು ಸಜೀವ ದಹನ

0

ಚಾಮರಾಜನಗರ(Chamarajanagara): ಕುರಿಗಳನ್ನು ಕೂಡಿ ಹಾಕಿದ್ದ ಶೆಡ್ ಗೆ ಬೆಂಕಿ ಬಿದ್ದಿರುವ ಪರಿಣಾಮ ಶೆಡ್ ನೊಳಗಿದ್ದ 35 ಕುರಿಗಳು ಸಜೀವ ದಹವಾಗಿದೆ.

ತಾಲೂಕಿನ ಕೋಡಿಉಗನೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ಮಹದೇವಸ್ವಾಮಿ ಎಂಬುವರಿಗೆ ಸೇರಿದ ಶೆಡ್ ಗೆ  ಮಧ್ಯರಾತ್ರಿ ಸುಮಾರು 1.30 ರ ವೇಳೆಗೆ ಬೆಂಕಿ ಹೊತ್ತಿಕೊಂಡಿದ್ದು, 35 ಕುರಿಗಳು ಸೇರಿದಂತೆ ಒಂದು ಎತ್ತಿನಗಾಡಿ, ಎರಡು ನೇಗಿಲು 400ಕ್ಕೂ ಹೆಚ್ಚು ತೆಂಗಿನಕಾಯಿಗಳು ಅಗ್ನಿಗೆ ಆಹುತಿಯಾಗಿದೆ.

ಕಿಡಿಗೇಡಿಗಳು ಈ  ಕೃತ್ಯವನ್ನು ಮಾಡಿರಬಹುದು ಶಂಕಿಸಲಾಗಿದ್ದು, ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕ ದಳ ಸಿಬ್ಬಂದಿಗಳು ಭೇಟಿ ನೀಡಿ, ಬೆಂಕಿ ನಂದಿಸಿದ್ದಾರೆ.

ಘಟನೆಯಿಂದ ಕುರಿಗಳನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಮಹಾದೇವಸ್ವಾಮಿ ಅವರ ಜೀವನ ದುಸ್ತರವಾಗಿದ್ದು, ಪರಿಹಾರಕ್ಕಾಗಿ ಮನವಿ ಮಾಡಿದ್ದಾರೆ.

ಹಿಂದಿನ ಲೇಖನಕೂದಲು ಉದುರುತ್ತಿದೆ ಎಂದು ನೇಣಿಗೆ ಕೊರಳೊಡ್ಡಿದ ಯುವತಿ
ಮುಂದಿನ ಲೇಖನಮೈಸೂರು: ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ