ಮನೆ ಅಪರಾಧ ಗುಂಡ್ಲುಪೇಟೆ: ರೈತನ ಮೇಲೆ ಹುಲಿ ದಾಳಿ- ಗಂಭೀರ ಗಾಯ

ಗುಂಡ್ಲುಪೇಟೆ: ರೈತನ ಮೇಲೆ ಹುಲಿ ದಾಳಿ- ಗಂಭೀರ ಗಾಯ

0

ಚಾಮರಾಜನಗರ(Chamarajanagara): ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ವ್ಯಕ್ತಿಯ ಮೇಲೆ ಹುಲಿ ದಾಳಿ ಮಾಡಿರುವ ಘಟನೆ ಗುಂಡ್ಲುಪೇಟೆ ತಾಲ್ಲೂಕಿನ ಗೋಪಾಲಪುರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರೈತ ಗವಿಸ್ವಾಮಿ ಹಲ್ಲೆಗೊಳಗಾದ ರೈತ.

ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಜಮೀನಿನಲ್ಲಿ ಮೇಯಲು ಬಿಟ್ಟಿದ್ದ ಹಸುವಿನ ಮೇಲೆ ಹುಲಿ ದಾಳಿ ಮಾಡಿದೆ ಆಗ ರೈತ ಗವಿಸ್ವಾಮಿ ಅದನ್ನು ತಡೆಯಲು ಯತ್ನಿಸಿದಾಗ ರೈತನ ಮುಖದ ಮೇಲೆ ದಾಳಿ ನಡೆಸಿದೆ ರೈತನ ಕೂಗಾಟ ಕೇಳಿ ಅಕ್ಕಪಕ್ಕದಲ್ಲಿದ್ದವರು ಕಿರುಚಾಡಿದ್ದಾರೆ. ಗಲಾಟೆಯಿಂದ ಗಾಬರಿಗೊಂಡ ಹುಲಿ ಸ್ಥಳದಿಂದ ಕಾಲ್ಕಿತ್ತಿದೆ ಹುಲಿ ದಾಳಿಯಿಂದ ಗಾಯವಾಗಿದ್ದ ರೈತ ಗವಿಸ್ವಾಮಿಯನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.

ಹಿಂದಿನ ಲೇಖನನೂಪುರ್ ಶರ್ಮಾ ಪರ ಪೋಸ್ಟ್: ಅಮರಾವತಿಯಲ್ಲಿ ಔಷಧ ವ್ಯಾಪಾರಿಯ ಹತ್ಯೆ
ಮುಂದಿನ ಲೇಖನಶಿಥಿಲಾವಸ್ಥೆಯಲ್ಲಿ ಶಾಲಾ ಕಟ್ಟಡ: ದುರಸ್ಥಿಗಾಗಿ ಶಾಲಾ ಮಕ್ಕಳ ಮನವಿ