ಮನೆ ಹವಮಾನ ಚಾಮರಾಜನಗರ ಜಿಲ್ಲೆಯಾದ್ಯಂತ ಭರ್ಜರಿ ಮಳೆ: ಮನೆ ಕುಸಿತ, 9 ಮಂದಿ ಪಾರು

ಚಾಮರಾಜನಗರ ಜಿಲ್ಲೆಯಾದ್ಯಂತ ಭರ್ಜರಿ ಮಳೆ: ಮನೆ ಕುಸಿತ, 9 ಮಂದಿ ಪಾರು

0

ಚಾಮರಾಜನಗರ: ಜಿಲ್ಲೆಯ ವಿವಿಧ ಕಡೆಗಳಲ್ಲಿ ಸೋಮವಾರ ತಡ ರಾತ್ರಿ ಬಿರುಸಿನ ಮಳೆಯಾಗಿದೆ.

Join our whatsapp group

ಕೊಳ್ಳೇಗಾಲ ಮತ್ತು ಯಳಂದೂರು ತಾಲ್ಲೂಕು ವ್ಯಾಪ್ತಿಯಲ್ಲಿ ಭರ್ಜರಿ ಮಳೆಯಾಗಿದೆ.

ಯಳಂದೂರು ತಾಲ್ಲೂಕಿನ ಕೋಮಾರನಪುರದಲ್ಲಿ ಮನೆ ಕುಸಿದು‌ ಬಿದ್ದಿದ್ದು, ತಂದೆ, ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.

ಕೊಳ್ಳೇಗಾಲದ ಮುಡಿಗುಂಡ ಬಡಾವಣೆಯ ಮಹದೇವಮ್ಮ ಎಂಬುವರ ಮನೆ ಗೋಡೆ ಕುಸಿದು, ಎರಡು ಬೈಕ್‌ ಗಳು ಜಖಂ ಆಗಿವೆ. ಮಹದೇವಮ್ಮ ಹಾಗೂ ಮನೆಯಲ್ಲಿದ್ದ ಒಂಬತ್ತು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಯಳಂದೂರು‌ ತಾಲ್ಲೂಕು ವ್ಯಾಪ್ತಿಯಲ್ಲಿ ರಾತ್ರಿ 11 ಗಂಟೆಯ ‌ನಂತರ ಧಾರಾಕಾರ ಮಳೆಯಾಗಿದೆ. ತಾಲ್ಲೂಕಿನ 7.15 ಸೆಂ.ಮೀ ಮಳೆಯಾಗಿದೆ. ಕೊಳ್ಳೇಗಾಲ ತಾಲ್ಲೂಕಿನ ಕುಣಗಳ್ಳಿಯಲ್ಲಿ 6.45 ಸೆಂ.ಮೀ ಮಳೆ ಬಿದ್ದಿದೆ.

ಬಿಳಿಗಿರಿರಂಗನ ಬೆಟ್ಟದ ಸುತ್ತಮುತ್ತ ಮೂರು ತಾಸು ಮಳೆಯಾಗಿದೆ. ರಾತ್ರಿ ಮೂರು ತಾಸು ಮಳೆ ಸುರಿದಿದೆ. ಇದರಿಂದ ಕಾಫಿ ಬೆಳಗಾರರಲ್ಲಿ ಹರ್ಷ ಮೂಡಿಸಿದೆ.ವಾರದಿಂದ ಅಲ್ಲಲ್ಲಿ ತುಂತುರು ಮಳೆಯಾಗುತ್ತಿತ್ತು. ಜಮೀನನ್ನು ಬಿತ್ತನೆಗೆ ರೈತರು ಸಿದ್ಧತೆಯಲ್ಲಿ ತೊಡಗಿದ್ದರು.

ರಾತ್ರಿ ಸುರಿದ ಮಳೆ ಕೃಷಿಕರಲ್ಲಿ ಸಂತಸ ತಂದಿದೆ. ದ್ವಿದಳ ದಾನ್ಯಗಳ ಬಿತ್ತನೆಗೆ ರೈತರು ಮುಂದಾಗಿದ್ದಾರೆ.

ರಾತ್ರಿ 11 ರಿಂದ ಬೆಳಗಿನ ಜಾವ ಎರಡು ಗಂಟೆಯ ತನಕ ಭರ್ಜರಿ ಮಳೆ ಆಯಿತು. ಕಾಡಂಚಿನ ಗ್ರಾಮಗಳ ರಸ್ತೆ ಸುತ್ತಮುತ್ತ ನೀರು ಹರಿದಿದ್ದು, ವಾತಾವರಣದಲ್ಲಿ ತಪ್ಪು ತುಂಬಿದೆ ಎಂದು ಕೃಷಿಕ ಶಿವರಾಜು ಹೇಳಿದರು.

ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ, ಜಕ್ಕಳ್ಳಿ, ಜಾಗೇರಿ, ಧನಗೆರೆ, ಸರಗೂರು, ನರಿಪುರ, ಗುಂಡೇಗಾಲ, ಪಾಳ್ಯ, ಕುಣಗಳ್ಳಿ, ಕುಂತೂರು, ಕೆಂಪನಪಾಳ್ಯ, ತಿಮ್ಮರಾಜಿಪುರ, ಮಧುವನಹಳ್ಳಿ,‌ ದೊಡ್ಡಿಂದುವಾಡಿ ಸೇರಿದಂತೆ ಅನೇಕ ಕಡೆ ಉತ್ತಮ ಮಳೆಯಾಗಿದೆ.

ಹನೂರು, ಚಾಮರಾಜನಗರ ಮತ್ತು ಗುಂಡ್ಲುಪೇಟೆ ತಾಲ್ಲೂಕುಗಳಲ್ಲೂ ತುಂತುರು ಮಳೆಯಾಗಿದೆ. ಬೆಳಿಗ್ಗೆಯಿಂದಲೇ ಮೋಡದ ವಾತಾವರಣ ಇದೆ.

ಹಿಂದಿನ ಲೇಖನಕಾನೂನು ಅಗತ್ಯದ ಬಗ್ಗೆ ಗಮನಹರಿಸಲು 8 ವಲಯದಲ್ಲಿ ನಿವೃತ್ತ ಜಿಲ್ಲಾ ನ್ಯಾಯಾಧೀಶರ ನೇಮಕ: ಹೈಕೋರ್ಟ್ ಗೆ ಬಿಬಿಎಂಪಿ ಮಾಹಿತಿ
ಮುಂದಿನ ಲೇಖನಏಪ್ರಿಲ್​ 8 ರಂದು ಸಂಸದೀಯ ಮಂಡಳಿ ಸಭೆಯಲ್ಲಿ ಪಟ್ಟಿ ಅಂತಿಮಗೊಳಿಸಲಾಗುವುದು: ಸಿಎಂ ಬೊಮ್ಮಾಯಿ