ಮನೆ ರಾಷ್ಟ್ರೀಯ ಹಣ ಅಕ್ರಮ ವರ್ಗಾವಣೆ: ಇ.ಡಿ ವಿಚಾರಣೆಗೆ ಹಾಜರಾದ ಸಂಜಯ್‌ ರಾವುತ್‌

ಹಣ ಅಕ್ರಮ ವರ್ಗಾವಣೆ: ಇ.ಡಿ ವಿಚಾರಣೆಗೆ ಹಾಜರಾದ ಸಂಜಯ್‌ ರಾವುತ್‌

0

ಮುಂಬೈ(Mumbai): ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇ.ಡಿ) ವಿಚಾರಣೆಗೆ ಶಿವಸೇನಾ ನಾಯಕ ಸಂಜಯ್‌ ರಾವುತ್‌ ಶುಕ್ರವಾರ ಮಧ್ಯಾಹ್ನ ಹಾಜರಾಗಿದ್ದಾರೆ.

ರಾವುತ್, ಅವರ ಪತ್ನಿ ಹಾಗೂ ಸ್ನೇಹಿತ ಶಾಮೀಲಾಗಿದ್ದಾರೆ ಎನ್ನಲಾದ ‘ಪತ್ರಾ ಚಾಲ್‌’ ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಸಮನ್ಸ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಇಂದು ದಕ್ಷಿಣ ಮುಂಬೈನ ಇ.ಡಿ ಕಚೇರಿಗೆ ಸಂಜಯ್ ರಾವುತ್ ತೆಳಿದ್ದಾರೆ.

ಇದಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾನೂನು ಪಾಲಿಸುವ ನಾಗರಿಕನಾಗಿ ತನಿಖೆಗೆ ಹಾಜರಾಗುವುದು ನನ್ನ ಕರ್ತವ್ಯ. ನಾನು ಇ.ಡಿಯನ್ನು ದೂಷಿಸುವುದಿಲ್ಲ. ಅವರಿಗೆ ಅಗತ್ಯವಿರುವ ಯಾವುದೇ ಮಾಹಿತಿಯನ್ನು ನಾನು ನೀಡುತ್ತೇನೆ’ ಎಂದು ತಿಳಿಸಿದರು.

ಇದೇ ವೇಳೆ, ಇ.ಡಿ ಕಚೇರಿ ಹೊರಗೆ ಜನಸಂದಣಿ ಹೆಚ್ಚಿಸುವುದು ಬೇಡವೆಂದು ತಮ್ಮ ಬೆಂಬಲಿಗರಿಗೆ ರಾವುತ್‌ ಮನವಿ ಮಾಡಿದರು.

ಹಿಂದಿನ ಲೇಖನಮಗುವಿಗೆ ನೇಣು ಬಿಗಿದು, ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ
ಮುಂದಿನ ಲೇಖನಆಜಾದಿ ಕಾ ಅಮೃತ್ ಮಹೋತ್ಸವ್:  ಮೈಸೂರು ರೈಲ್ವೆ ಸಂರಕ್ಷಣಾ ದಳದಿಂದ ಬೈಕ್ ಅಭಿಯಾನ