ಮನೆ ಸುದ್ದಿ ಜಾಲ ಚಾಮರಾಜನಗರ: ಬೆಳ್ಳಿ ರಥದಲ್ಲಿ ವಾಟಾಳ್ ನಾಗರಾಜ್ ಮೆರವಣಿಗೆ

ಚಾಮರಾಜನಗರ: ಬೆಳ್ಳಿ ರಥದಲ್ಲಿ ವಾಟಾಳ್ ನಾಗರಾಜ್ ಮೆರವಣಿಗೆ

0

ಚಾಮರಾಜನಗರ: ಜಿಲ್ಲೆಯನ್ನಾಗಿ ಘೋಷಿಸಲು ಶ್ರಮವಹಿಸಿದ ಕನ್ನಡ ಚಳವಳಿಗಾರ ಹಾಗೂ ಮಾಜಿ ಶಾಸಕ ವಾಟಾಳ್ ನಾಗರಾಜ್ ಅವರನ್ನು ಕನ್ನಡಪರ ಹೋರಾಟಗಾರರು ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡಿದರು.

ಚಾಮರಾಜೇಶ್ವರ ದೇವಾಲಯದಿಂದ ಜಿಲ್ಲಾಡಳಿತ ಭವನದ ತನಕ ಜಾನಪದ ಕಲಾತಂಡಗಳು, ಕನ್ನಡ ಧ್ವಜಗಳ ಜೊತೆಗೆ ಬೆಳ್ಳಿ ರಥದಲ್ಲಿ ವಾಟಾಳ್ ನಾಗರಾಜ್ ಅವರನ್ನು ಮೆರವಣಿಗೆ ಮಾಡುವ ಮೂಲಕ ಕನ್ನಡಪರ ಸಂಘಟನೆಗಳು ಇಂದು ಬೆಳ್ಳಿಹಬ್ಬ ಆಚರಿಸಿದರು.

ಆ.15 ಕ್ಕೆ ಚಾಮರಾಜನಗರ ಜಿಲ್ಲೆಯಾಗಿ 25 ವರ್ಷಗಳು ಕಳೆದಿದ್ದು 3 ತಿಂಗಳುಗಳಾದರೂ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಆಗಲಿ ರಜತ ಮಹೋತ್ಸವ ಆಚರಣೆ ಮಾಡಿಲ್ಲ. ಹೀಗಾಗಿ ಕನ್ನಡಪರ ಸಂಘಟನೆಗಳೇ ಇಂದು ಬೆಳ್ಳಿ ಹಬ್ಬ ಆಚರಿಸಿ ಗಮನ ಸೆಳೆದಿದ್ದಾರೆ.

ಕತ್ತೆ, ಕುದುರೆ, ಎಮ್ಮೆ, ಗೋಣಿ ಚೀಲ, ಛತ್ರಿ ಹೀಗೆ ತರಹವಾರಿ ಅವತಾರದಲ್ಲಿ ಪ್ರತಿಭಟಿಸುತ್ತಿದ್ದ ವಾಟಾಳ್ ನಾಗರಾಜ್ ಅವರನ್ನು ಬೆಳ್ಳಿರಥದಲ್ಲಿ ಕೂರಿಸಿ ಕನ್ನಡಪರ ಸಂಘಟನೆಗಳು ಹೃದಯಸ್ಪರ್ಶಿಯಾಗಿ ಅಭಿನಂದಿಸಿದೆ.

ಹಿಂದಿನ ಲೇಖನಎರಡನೇ ಡಿಜಿಟಲ್ ಲೋಕ ಅದಾಲತ್: ಕನಿಷ್ಠ 1 ಕೋಟಿ ಪ್ರಕರಣಗಳ ವಿಚಾರಣೆ ಸಾಧ್ಯತೆ
ಮುಂದಿನ ಲೇಖನಸ್ಮಶಾನಕ್ಕೆ ಸಾಗಲು ಸಮರ್ಪಕ ರಸ್ತೆಯ ಕೊರತೆ- ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ