ಮನೆ ರಾಜ್ಯ ಕರ್ನಾಟಕದಲ್ಲಿ ಕಾಂಗ್ರೆಸ್ ಅನ್ನು ಬೂದುಗನ್ನಡಿ ಹಾಕಿಕೊಂಡು ಹುಡುಕುವ ಸ್ಥಿತಿ ಬರಲಿದೆ: ಕೆ.ಎಸ್. ಈಶ್ವರಪ್ಪ

ಕರ್ನಾಟಕದಲ್ಲಿ ಕಾಂಗ್ರೆಸ್ ಅನ್ನು ಬೂದುಗನ್ನಡಿ ಹಾಕಿಕೊಂಡು ಹುಡುಕುವ ಸ್ಥಿತಿ ಬರಲಿದೆ: ಕೆ.ಎಸ್. ಈಶ್ವರಪ್ಪ

0

ಚಿಕ್ಕಮಗಳೂರು : ಕಾಂಗ್ರೆಸ್ ನ್ನು ಬೂದುಗನ್ನಡಿ ಹಾಕಿಕೊಂಡು ಹುಡುಕುವ ಪರಿಸ್ಥಿತಿ ಕರ್ನಾಟಕದಲ್ಲೂ ಬರುತ್ತದೆ ಎಂದು ಮಾಜಿ ಸಚಿವ, ಹಿರಿಯ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಕಡೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ನಿಂದ ಇಂದು ಟಿಕೆಟ್ ಬಿಡುಗಡೆಯಾಗುತ್ತಿದೆ, ಆ ಬಳಿಕ ಕಾಂಗ್ರೆಸ್ ನಲ್ಲಿ ಆಂತರಿಕ ಸ್ಫೋಟವಾಗುತ್ತದೆ.ಚುನಾವಣೆ ಮುಗಿದ ಮೇಲೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನ ಹುಡುಕಬೇಕು ಎಂದು ಹೇಳಿದರು.

ನಿರೀಕ್ಷೆಗೂ ಮೀರಿ, ಭಾರತೀಯ ಜನತಾ ಪಾರ್ಟಿಗೆ ರಾಜ್ಯದ ಜನ ಬೆಂಬಲ ನೀಡುತ್ತಿದ್ದಾರೆ. ರಾಜ್ಯದ ಅಭಿವೃದ್ಧಿ ಕೆಲಸ ನೋಡಿ ರಾಜ್ಯದ ಜನ ಮೆಚ್ಚಿದ್ದಾರೆ. 224ರಲ್ಲಿ ಬಿಜೆಪಿ ಮೊದಲು ಗೆಲ್ಲುವುದೇ ಕಡೂರು ಕ್ಷೇತ್ರ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ಹಿಂದಿನ ಲೇಖನಮಾಂಸದ ವ್ಯಾಪಾರಿಗಳ ಮೇಲೆ ಮೂವರು ಪೊಲೀಸರು  ಸೇರಿದಂತೆ ೭ ಮಂದಿ ಇಂದ ಹಲ್ಲೆ, ಸುಲಿಗೆ:  ದೂರು ದಾಖಲು
ಮುಂದಿನ ಲೇಖನಗೆಲ್ಲುವ ಶಕ್ತಿ ಇರುವ ಎಂಎಲ್’ಸಿಗಳನ್ನು ಅಭ್ಯರ್ಥಿ ಸ್ಥಾನಕ್ಕೆ ಪರಿಗಣಿಸುತ್ತೇವೆ: ಡಿಕೆಶಿ