ಹೊಸದಿಲ್ಲಿ: ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿ ಭಾರತ ಮೊದಲ ಸ್ಥಾನಕ್ಕೇರಿದೆ. ವಿಶ್ವಸಂಸ್ಥೆ ಬುಧವಾರ ಬಿಡುಗಡೆ ಮಾಡಿರುವ ದತ್ತಾಂಶ ಈ ಮಾಹಿತಿ ನೀಡಿದೆ. ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ ಚೀನಾದ ಜನಸಂಖ್ಯೆ 142.57 ಕೋಟಿ ಇದ್ದರೆ, ಭಾರತದ ಜನಸಂಖ್ಯೆ 142.86 ಕೋಟಿ ದಾಟಿದೆ.
1950ರಲ್ಲಿ ವಿಶ್ವಸಂಸ್ಥೆಯು ಜಗತ್ತಿನ ಜನಸಂಖ್ಯೆಯ ದತ್ತಾಂಶಗಳನ್ನು ಸಂಗ್ರಹಿಸಲು ಆರಂಭಿಸಿದ ಬಳಿಕ, ಅತ್ಯಂತ ಜನಸಂಖ್ಯೆಯುಳ್ಳ ದೇಶಗಳ ಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ಭಾರತ ಪ್ರಥಮ ಸ್ಥಾನ ಪಡೆದಿದೆ.
1960ರ ನಂತರ ಮೊದಲ ಸಲ ಚೀನಾದ ಜನಸಂಖ್ಯೆಯು ಕಳೆದ ವರ್ಷ ಕುಸಿತ ಕಂಡಿತ್ತು. ಮಾಜಿ ನಾಯಕ ಮಾವೋ ಜೆಡಾಂಗ್ ಅವರ ಅನಾಹುತಕಾರಿ ಕೃಷಿ ನೀತಿಗಳಿಂದಾಗಿ ಲಕ್ಷಾಂತರ ಜನರು 1960ರ ದಶಕದಲ್ಲಿ ಹಸಿವಿನಿಂದ ಸಾವಿಗೀಡಾಗಿದ್ದರು.
ಒಂದೇ ಮಗು ನೀತಿಯಿಂದಾಗಿ ಚೀನಾದ ಜನಸಂಖ್ಯೆಯಲ್ಲಿ ಗಣನೀಯ ಇಳಿಕೆ ಉಂಟಾಗಿದೆ. ಒಂದೆರಡು ದಶಕಗಳಲ್ಲಿನ ಜನನ ನಿಯಂತ್ರಣವು ಈಗ ಅದಕ್ಕೆ ಮಾನವ ಸಂಪನ್ಮೂಲದ ಕೊರತೆ ಉಂಟಾಗಲು ಕಾರಣವಾಗಿದೆ. ಕೆಲವು ಪ್ರದೇಶಗಳು ಈಗಾಗಲೇ ಜನನ ಪ್ರಮಾಣ ಹೆಚ್ಚಿಸಲು ಯೋಜನೆಗಳನ್ನು ಪ್ರಕಟಿಸಿವೆ. ಆದರೆ ಜನಸಂಖ್ಯಾ ಕುಸಿತದ ಸನ್ನಿವೇಶವನ್ನು ತಡೆಯುವುದು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ.
ಭಾರತವು 2011ರ ಬಳಿಕ ಮತ್ತೆ ಜನಗಣತಿ ನಡೆಸಿಲ್ಲ. ಹೀಗಾಗಿ ಭಾರತದಲ್ಲಿ ಇರುವ ಜನಸಂಖ್ಯೆ ಎಷ್ಟು ಎಂಬ ಬಗ್ಗೆ ಅದರ ಬಳಿ ಯಾವುದೇ ನಿರ್ದಿಷ್ಟ ಅಧಿಕೃತ ದತ್ತಾಂಶ ಇಲ್ಲ. ಭಾರತದಲ್ಲಿ ಪ್ರತಿ ದಶಕಕ್ಕೆ ಒಮ್ಮೆ ಜನಗಣತಿ ನಡೆಸುವುದು ವಾಡಿಕೆ. ಆದರೆ 2021ರಲ್ಲಿ ಕೋವಿಡ್ ಸಾಂಕ್ರಾಮಿಕದ ಕಾರಣದಿಂದ ಅದು ವಿಳಂಬವಾಗಿತ್ತು.
ಭಾರತದ ಜನಸಂಖ್ಯೆಯಲ್ಲಿ 4ನೇ 1 ಭಾಗದಷ್ಟು ಮಂದಿ 14 ವರ್ಷಕ್ಕಿಂತ ಕೆಳಗಿನವರಾಗಿದ್ದಾರೆ ಎನ್ನುತ್ತದೆ ವಿಶ್ವಸಂಸ್ಥೆಯ ವರದಿ. ಶೇ 68ರಷ್ಟು ಜನಸಂಖ್ಯೆ 15 ರಿಂದ 64 ವರ್ಷದ ನಡುವೆ ಇದ್ದರೆ, ಶೇ 7ರಷ್ಟು ಜನರು 65 ವರ್ಷ ದಾಟಿದವರಾಗಿದ್ದಾರೆ. ಕೇರಳ ಮತ್ತು ಪಂಜಾಬ್ ನಲ್ಲಿ ವಯಸ್ಕರ ಸಂಖ್ಯೆ ಹೆಚ್ಚಿದ್ದರೆ, ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿ ಕಿರಿಯರ ಸಂಖ್ಯೆ ಅಧಿಕ.
ಇನ್ನೂ ಮೂರು ದಶಕಗಳ ಕಾಲ ಭಾರತದ ಜನಸಂಖ್ಯೆ ಏರಿಕೆಯಾಗುತ್ತಲೇ ಇರುವ ಸಾಧ್ಯತೆ ಎಂದು ವಿವಿಧ ಸಂಸ್ಥೆಗಳು ಅಭಿಪ್ರಾಯ ವ್ಯಕ್ತಪಡಿಸಿವೆ. ಭಾರತದ ಜನಸಂಖ್ಯೆಯು ಮೂರು ದಶಕಗಳಲ್ಲಿ 165 ಕೋಟಿಯ ಗರಿಷ್ಠ ಮಟ್ಟಕ್ಕೆ ತಲುಪಲಿದೆ. ಬಳಿಕ ಅದು ಕುಸಿತ ಕಾಣತೊಡಗಲಿದೆ ಎಂದು ಹೇಳಲಾಗಿದೆ.
ಏರಿಕೆಯತ್ತ ಪ್ರಪಂಚದ ಜನಸಂಖ್ಯೆ
2023ರ ಮಧ್ಯಭಾಗದ ವೇಳೆಗೆ ಜಾಗತಿಕ ಜನಸಂಖ್ಯೆಯು 8.045 ಬಿಲಿಯನ್ ಗೆ ತಲುಪಲಿದೆ ಎಂದು ವಿಶ್ವಸಂಸ್ಥೆಯ ಹೊಸ ವರದಿ ಲೆಕ್ಕಾಚಾರ ಹಾಕಿದೆ. ಬೇರೆ ದೇಶಗಳಲ್ಲಿ, ಮುಖ್ಯವಾಗಿ ಯುರೋಪ್ ಹಾಗೂ ಏಷ್ಯಾದಲ್ಲಿ ಜನಸಂಖ್ಯೆಯು ಮುಂದಿನ ದಶಕಗಳಲ್ಲಿ ಇಳಿಕೆಯ ಹಾದಿಯಲ್ಲಿ ಸಾಗಲಿದೆ ಎಂದು ಕಳೆದ ವರ್ಷದ ಜುಲೈನಲ್ಲಿ ಪ್ರಕಟವಾದ ವಿಶ್ವಸಂಸ್ಥೆ ವರದಿ ಹೇಳಿತ್ತು.
ಕಳೆದ ವರ್ಷದ ನವೆಂಬರ್ ನಲ್ಲಿ ಜಗತ್ತಿನ ಜನಸಂಖ್ಯೆ 800 ಕೋಟಿ ಗಡಿ ಕ್ರಮಿಸಿತ್ತು. 2030ರಲ್ಲಿ ಜನಸಂಖ್ಯೆಯು 850 ಕೋಟಿ ತಲುಪಲಿದೆ.
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
ಮಿನಿ ಉದ್ಯೋಗ ಮೇಳ..!
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.