ಮನೆ ರಾಜ್ಯ ಸಿದ್ದರಾಮಯ್ಯರಂಥವರು ಇರುವುದೇ ದುರಂತ: ಸಚಿವ ಅಶ್ವತ್ಥ ನಾರಾಯಣ

ಸಿದ್ದರಾಮಯ್ಯರಂಥವರು ಇರುವುದೇ ದುರಂತ: ಸಚಿವ ಅಶ್ವತ್ಥ ನಾರಾಯಣ

0

ಮಂಡ್ಯ (Mandya): ಸಿದ್ದರಾಮಯ್ಯ ರವರಂಥವರು ಇರುವುದೇ ದುರಂತ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, 75 ವರ್ಷ ವಯಸ್ಸಾಗುತ್ತಿದ್ದರೂ ಸಿದ್ದರಾಮಯ್ಯ ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಇಂಥವರು ಇರುವುದೇ ದುರಂತ ಎಂದಿದ್ದಾರೆ.

ಸಿದ್ದರಾಮೋತ್ಸವ ಎಂದರೆ ಮನೆಗೆ ಹೋಗು ಎಂದರ್ಥವಾಗಿದೆ. 75 ವರ್ಷ ಆಗಿದೆ, ಸಾಕಪ್ಪ ಸಿದ್ದರಾಮಯ್ಯ, ನೀನು ಮಾಡಿದ್ದೇ ಸಾಕು, ಈ ಕಾಲಕ್ಕೆ ನೀವು ಅಪ್ರಸ್ತುತ, ಮನೆಗೆ ಹೋಗಿ ಎಂದು ಹೇಳಿ ಕಳುಹಿಸುವುದೇ ಸಿದ್ದರಾಮೋತ್ಸವವಾಗಿದೆ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ರಾಜ್ಯಕ್ಕೆ ಯಾವ ಕೊಡುಗೆಯನ್ನೂ ಕೊಟ್ಟಿಲ್ಲ. ಅತಿ ಆಸೆ, ಸ್ವಾರ್ಥವೇ ಅವರಲ್ಲಿ ತುಂಬಿ ತುಳುಕುತ್ತಿದೆ. 75 ವರ್ಷ ವಯಸ್ಸಿನಲ್ಲಿ ಸಮಾಜಕ್ಕಾಗಿ ಬದುಕುವುದನ್ನು ಬಿಟ್ಟು ಅವರಿಗಾಗಿ ಮಾತ್ರ ಬದುಕುತ್ತಿದ್ದಾರೆ ಎಂದರು.

ಹಿಂದಿನ ಲೇಖನಜು.15 ರಿಂದ ವಿಶೇಷ ಅಭಿಯಾನ: 18 ರಿಂದ 59 ವರ್ಷದವರಿಗೆ ಉಚಿತ ಕೋವಿಡ್‌ ಬೂಸ್ಟರ್‌ ಡೋಸ್‌
ಮುಂದಿನ ಲೇಖನಕರಾವಳಿ, ಮಲೆನಾಡಿನಲ್ಲಿ ನಾಲ್ಕು ದಿನ ಭಾರಿ ಮಳೆ