ಮನೆ ರಾಜಕೀಯ ರಾಗಿ ಖರೀದಿ‌ ಕೇಂದ್ರದಲ್ಲಿ ಕಾಣುವ ದಲ್ಲಾಳಿಗಳ ವಿರುದ್ದ ಕಾನೂನು ಕ್ರಮ: ಕೆ.ಗೋಪಾಲಯ್ಯ

ರಾಗಿ ಖರೀದಿ‌ ಕೇಂದ್ರದಲ್ಲಿ ಕಾಣುವ ದಲ್ಲಾಳಿಗಳ ವಿರುದ್ದ ಕಾನೂನು ಕ್ರಮ: ಕೆ.ಗೋಪಾಲಯ್ಯ

0

ಬೆಂಗಳೂರು(Bengaluru): ರಾಗಿ ಖರೀದಿ ಕೇಂದ್ರಗಳಲ್ಲಿ ಮಧ್ಯ ವರ್ತಿಗಳು ಮತ್ತು ದಲ್ಲಾಳಿಗಳು ಕಂಡು ಬಂದರೆ ಅವರ ವಿರುದ್ಧ ಸರ್ಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಹಾಸನ‌ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ರಾಗಿ ಬೆಳೆಗಾರರ ಹಿತ ಕಾಪಾಡಲು ಈಗಾಗಲೇ ಮುಖ್ಯ ಮಂತ್ರಿಗಳು ಕೇಂದ್ರ ಆಹಾರ ಖಾತೆ ಸಚಿವರೊಂದಿಗೆ ಮಾತನಾಡಿ ಒಪ್ಪಿಗೆ ಪಡೆದಿದ್ದು, ಶ್ರೀಘ್ರದಲ್ಲೆ ರಾಗಿ ಖರೀದಿ ಆರಂಭವಾಗಲಿದೆ ಎಂದರು.

ಹೆಚ್ಚು ರಾಗಿ ಬೆಳೆಯುವ ಹಾಸನ, ಹಳೆ ಮೈಸೂರು ಸೇರಿದಂತೆ ರಾಜ್ಯದ ಎಲ್ಲ ಭಾಗದ ರಾಗಿ ಬೆಳೆಗಾರರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ‌ಕ್ರಮ‌ಕೈಗೊಂಡಿದೆ. ಖರೀದಿ ಕೇಂದ್ರ ಮಧ್ಯ ವರ್ತಿಗಳು, ದಲ್ಲಾಲರು ಕಂಡು ಬಂದರೆ ಅವರ ವಿರುದ್ದ ಕಠಿಣ ಕ್ರಮ‌ ಕೈಗೊಳ್ಳಲಾಗುವುದು ಎಂದರು.

ರೈತರಿಗೆ ಅನುಕೂಲ‌ ಕಲ್ಪಿಸುವ ಹಿನ್ನೆಲೆಯಲ್ಲಿ ಮತ್ತೆ ಎರಡು ಲಕ್ಷ ಮೆಟ್ರಿಕ್ ‌ಟನ್ ರಾಗಿ ಖರೀದಿಗೆ ಸರ್ಕಾರ ತೀರ್ಮಾನ ಮಾಡಿದೆ ಎಂದು ಅವರು ತಿಳಿಸಿದರು.

ಹಿಂದಿನ ಲೇಖನ4 -5ನೇ ತರಗತಿಯ ವಿದ್ಯಾರ್ಥಿಗಳಿಗೆ ಹೋಂವರ್ಕ್ ಹಗುರಗೊಳಿಸಲಾಗುತ್ತದೆ: ಸಚಿವ ಬಿ.ಸಿ.ನಾಗೇಶ್
ಮುಂದಿನ ಲೇಖನಕೊರೊನಾ ಸಾವಿನಲ್ಲಿ ಸುಳ್ಳು ಲೆಕ್ಕ ಹೇಳಿ ಜಗತ್ತಿನ ಕಣ್ಣಿಗೆ ಮಣ್ಣೆರಚಿದ್ದ ಕೇಂದ್ರ: ದಿನೇಶ್ ಗುಂಡೂರಾವ್