ಮನೆ ರಾಜಕೀಯ ಚಾಮುಂಡೇಶ್ವರಿ ಕ್ಷೇತ್ರದಿಂದ ಎನ್.ಎಂ.ಜಗದೀಶ್ ಗೌಡರಿಗೆ ಬಿಜೆಪಿ ಟಿಕೆಟ್ ನೀಡಲಿ: ಅಭಿಮಾನಿಗಳ ಒತ್ತಾಯ

ಚಾಮುಂಡೇಶ್ವರಿ ಕ್ಷೇತ್ರದಿಂದ ಎನ್.ಎಂ.ಜಗದೀಶ್ ಗೌಡರಿಗೆ ಬಿಜೆಪಿ ಟಿಕೆಟ್ ನೀಡಲಿ: ಅಭಿಮಾನಿಗಳ ಒತ್ತಾಯ

0

ಮೈಸೂರು(Mysuru): ಎನ್.ಎಂ.ಜಗದೀಶ್ ಗೌಡರಿಗೆ ಬಿಜೆಪಿ ಪಕ್ಷದಿಂದ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದಿಂದ ಟಿಕೇಟ್ ನೀಡುವಂತೆ ಅಭಿಮಾನಿಗಳು ವರಿಷ್ಠರಿಗೆ ಒತ್ತಾಯಿಸಿದ್ದಾರೆ.

ಇಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅಭಿಮಾನಿ ಬಳಗದ ಕಾರ್ಯದರ್ಶಿ ಶಾಂತ, ಮೈಸೂರು ಜಿಲ್ಲೆ, ಮೈಸೂರು ತಾಲ್ಲೂಕು, ನಾಗನಹಳ್ಳಿ ಗ್ರಾಮದ ನಿವಾಸಿ ಎನ್.ಎಂ. ಜಗದೀಶ್‌ ಗೌಡರವರು ಬಿಜೆಪಿ ಪಕ್ಷಕ್ಕೆ 1988-1989 ಸೇರ್ಪಡೆಯಾದರು. ಅಂದಿನಿಂದಲೂ ಸುಮಾರು 34 ವರ್ಷ ಸತತವಾಗಿ ಪಕ್ಷಕ್ಕಾಗಿ, ಜನರ ಸೇವೆಗಾಗಿ ತಮ್ಮ ಬದುಕನ್ನು ಮೀಸಲಿಟ್ಟಿದ್ದಾರೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್,  ಮುಖಂಡರ ಪ್ರೀತಿ ವಿಶ್ವಾಸ ಹಾಗೂ ಆಶೀರ್ವಾದದಿಂದ ಬೆಳೆದು ಬಂದಿರುವ ಎನ್.ಎಂ. ಜಗದೀಶ್ ಗೌಡರಿಗೆ ಈ ಬಾರಿಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಪಕ್ಷದಿಂದ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಟಿಕೆಟ್ ನೀಡುವಂತೆ ಮನವಿ ಮಾಡಿದರು.

ಅಧ್ಯಕ್ಷೆ ಯಶೋಧರಾಜ್, ಉಪಾಧ್ಯಕ್ಷೆ ಅರ್ಚನ ಜೊತೆಗಿದ್ದರು.

ಹಿಂದಿನ ಲೇಖನಮಂಡ್ಯ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರೈತರಿಂದ ಬೃಹತ್ ಪ್ರತಿಭಟನಾ ರ್ಯಾಲಿ
ಮುಂದಿನ ಲೇಖನಪ್ರವಾಸಿ ಮಂದಿರ ಉದ್ಘಾಟನೆ ವೇಳೆ ಸಂಸದ ವಿ.ಶ್ರೀನಿವಾಸ್ ಪ್ರಸಾದ್- ಮಾಜಿ ಎಂಎಲ್ ಸಿ ಸಿ.ರಮೇಶ್ ನಡುವೆ ಮಾತಿನ ಚಕಮಕಿ