ಮನೆ ರಾಜ್ಯ ಕಾಮಗಾರಿ ಎಸ್ಟೀಮೇಟ್‌ ಗಿಂತ ಹೆಚ್ಚು ಹಣ: ಸಚಿವ ಮುನಿರತ್ನ ರಾಜೀನಾಮೆಗೆ ಆಗ್ರಹಿಸಿದ ಎಂ. ಲಕ್ಷ್ಮಣ್.

ಕಾಮಗಾರಿ ಎಸ್ಟೀಮೇಟ್‌ ಗಿಂತ ಹೆಚ್ಚು ಹಣ: ಸಚಿವ ಮುನಿರತ್ನ ರಾಜೀನಾಮೆಗೆ ಆಗ್ರಹಿಸಿದ ಎಂ. ಲಕ್ಷ್ಮಣ್.

0

ಮೈಸೂರು(Mysuru): ಆರ್ ಆರ್ ನಗರದಲ್ಲಿ ಕಾಮಗಾರಿ ಅಂದಾಜಿಗಿಂತಲೂ ಹೆಚ್ಚು ಹಣ ಪಡೆಯಲಾಗಿದ್ದು, ಸರ್ಕಾರಕ್ಕೆ ನಷ್ಟವಾಗಿದೆ ಎಂದು ಲೋಕಯುಕ್ತವೇ ವರದಿ ನೀಡಿದೆ. ಹೀಗಾಗಿ  ಸಚಿವ ಮುನಿರತ್ನ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆಗ್ರಹಿಸಿದರು.

ನಗರದಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಟಿಯಲ್ಲಿ,  ಭ್ರಷ್ಟಾಚಾರದ ಬಗ್ಗೆ ದಾಖಲೆ ನೀಡಿ ಎಂಬ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ದಾಖಲೆ ಬಿಡುಗಡೆ ಮಾಡಿದರು.

ಬೆಂಗಳೂರಿನಲ್ಲಿ ಕಾಮಗಾರಿ‌ ಮಾಡದೆ 5 ಸಾವಿರ ಕೋಟಿ‌ ಹಣ ಪಡೆಯಲಾಗಿದೆ. ದಾಖಲೆ ಇಲ್ಲಿದೆ ಏಕೆ ಈ ಬಗ್ಗೆ ಕ್ರಮ ಕೈಗೊಂಡಿಲ್ಲ ? ಎಂದು ಪ್ರಶ್ನಿಸಿದರು.

ಸಚಿವ ಮುನಿರತ್ನ ಕ್ಷೇತ್ರ ಆರ್ ಆರ್ ನಗರದಲ್ಲಿ ಕಾಮಗಾರಿ ಎಸ್ಟೀಮೇಟ್‌ ಗಿಂತ ಹೆಚ್ಚು ಹಣ ಪಡೆಯಲಾಗಿದೆ. ಈ ಬಗ್ಗೆ ಸಂಸದ ಡಿ ಕೆ‌ ಸುರೇಶ್ ಲೋಕಾಯುಕ್ತಗೆ ದೂರು ನೀಡಿದ್ದರು. ಈ ಬಗ್ಗೆ ಲೋಕಾಯುಕ್ತ ತನಿಖೆ‌ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, 118.75 ಕೋಟಿ ಸರ್ಕಾರಕ್ಕೆ ನಷ್ಟವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೂ 40 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. 114 ಕಾಮಗಾರಿಯಲ್ಲಿ ಈ ರೀತಿ ಹಣ ಪಡೆಯಲಾಗಿದೆ. 24/01/2022 ರಂದು ಲೋಕಾಯುಕ್ತ ವರದಿ ಸಿದ್ದವಾಗಿ ಜೂನ್ 2022ರಂದು ಲೋಕಾಯುಕ್ತ ಸರ್ಕಾರಕ್ಕೆ ವರದಿ ನೀಡಿದೆ. ಹೀಗಾಗಿ ಮುನಿರತ್ನ ಅವರಿಂದ ಮುಖ್ಯಮಂತ್ರಿ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.

ಹಿಂದಿನ ಲೇಖನಅಕ್ರಮ ಆಸ್ತಿ ಗಳಿಕೆ ಆರೋಪ: ಡಿಕೆಶಿ ಆಪ್ತ ವಿಜಯ್ ಕುಮಾರ್ ಸಿಬಿಐ ನೋಟಿಸ್
ಮುಂದಿನ ಲೇಖನಆರ್ ಟಿಐ ಕಾಯ್ದೆ ಅಡಿ ಮಾಹಿತಿ ನೀಡದ ಆರೋಪ: ಗ್ರಾಪಂ ಕಾರ್ಯದರ್ಶಿಗೆ 5 ಸಾವಿರ ರೂ. ದಂಡ