ಮನೆ ಅಪರಾಧ ಮಳವಳ್ಳಿ: ಸರ್ಕಾರಿ ಬಸ್ ನಿಲ್ದಾಣದಲ್ಲಿ ಏಳು ತಿಂಗಳ ಮಗು ಅಪಹರಣ

ಮಳವಳ್ಳಿ: ಸರ್ಕಾರಿ ಬಸ್ ನಿಲ್ದಾಣದಲ್ಲಿ ಏಳು ತಿಂಗಳ ಮಗು ಅಪಹರಣ

0

ಮಳವಳ್ಳಿ: ಏಳು ತಿಂಗಳ ಮಗುವನ್ನ ಅಪರಿಚಿತ ಮಹಿಳೆ ಅಪಹರಣ ಮಾಡಿರುವ ಘಟನೆ ಪಟ್ಟಣದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.

ಏಳು ತಿಂಗಳ ಮಗುವನ್ನುತಾಯಿ ಮಹಿಳೆ ಕೈಗೆ ನೀಡಿ ಅಂಗಡಿಗೆ ಹೋಗಿ ಬರುವಷ್ಟರಲ್ಲಿ ಮಗುವಿನ ಜೊತೆ ಮಹಿಳೆ ನಾಪತ್ತೆಯಾಗಿದ್ದಾರೆ.

ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕು ವಡ್ಡರಹಳ್ಳಿ ಗ್ರಾಮದ ಶಿವಕುಮಾರ್ ಪತ್ನಿ ಸವಿತಾ ಮಗು ಕಳೆದುಕೊಂಡ ತಾಯಿಯಾಗಿದ್ದಾರೆ.

ಮಳವಳ್ಳಿ ಸಾರಿಗೆ ಬಸ್ ನಿಲ್ದಾಣಕ್ಕೆ ಏಳು ತಿಂಗಳ ಮಗುವಿನ ಜೊತೆ ಬಂದಿದ್ದ ಸವಿತಾ ಅಂಗಡಿಗೆ ಹೋಗಿ ಬರಲು ಮಗುವನ್ನು ಮಹಿಳೆ ಯೊಬ್ಬರಿಗೆ ನೀಡಿದ್ದು.ಹೋಗಿ ಬರುವಷ್ಟರಲ್ಲಿ ಮಹಿಳೆ ಮಗುವಿನೊಂದಿಗೆ ನಾಪತ್ತೆಯಾಗಿದ್ದರು,ಸುತ್ತಮುತ್ತಲು ಹುಡುಕಾಡಿದರೂ ಮಗು ಪತ್ತೆಯಾಗದ ಹಿನ್ನೆಲೆಯಲ್ಲಿ ಪಟ್ಟಣ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲು ಮಾಡಿದ್ದು ಪೊಲೀಸರು ಮಗುವಿನ ಜೊತೆ ಪರಾರಿ

ಯಾಗಿರುವ ಮಹಿಳೆಗಾಗಿ ಶೋಧ ಕೈಗೊಂಡಿದ್ದಾರೆ.

ಹಿಂದಿನ ಲೇಖನಬೋಳಮಾನದೊಡ್ಡಿ ಏತ ನೀರಾವರಿ ಯೋಜನೆಯ ಕಾರ್ಯಸಾಧ್ಯತಾ ವರದಿ ಸರಕಾರಕ್ಕೆ ಸಲ್ಲಿಕೆ: ಸಚಿವ ಎನ್ ಎಸ್ ಭೋಸರಾಜು
ಮುಂದಿನ ಲೇಖನಅಕ್ರಮ ಗಣಿಗಾರಿಕೆ ದಂಧೆಕೋರರಿಂದ ವ್ಯಕ್ತಿ ಮೇಲೆ ಹಲ್ಲೆ