ಮನೆ ರಾಜಕೀಯ ಮಂಡ್ಯ: ನಾಗಮಂಗಲಕ್ಕೆ ಸುಧಾ ಶಿವರಾಮೇಗೌಡ, ಕೆ.ಆರ್.ಪೇಟೆಯಿಂದ ಕೆ.ಸಿ.ನಾರಾಯಣಗೌಡಗೆ ಬಿಜೆಪಿ ಟಿಕೆಟ್

ಮಂಡ್ಯ: ನಾಗಮಂಗಲಕ್ಕೆ ಸುಧಾ ಶಿವರಾಮೇಗೌಡ, ಕೆ.ಆರ್.ಪೇಟೆಯಿಂದ ಕೆ.ಸಿ.ನಾರಾಯಣಗೌಡಗೆ ಬಿಜೆಪಿ ಟಿಕೆಟ್

0

ಮಂಡ್ಯ: ಮಂಗಳವಾರ ರಾತ್ರಿ ಬಿಜೆಪಿ ಟಿಕೆಟ್‌ ಘೋಷಣೆಯಾಗಿದ್ದು ನಾಗಮಂಗಲ ಕ್ಷೇತ್ರಕ್ಕೆ ಮಾಜಿ ಶಾಸಕ, ಸಂಸದ ಎಲ್‌.ಆರ್‌.ಶಿವರಾಮೇಗೌಡ ಅವರ ಪತ್ನಿ ಸುಧಾ ಶಿವರಾಮೇಗೌಡ ಅವರ ಹೆಸರು ಘೋಷಣೆ ಮಾಡಲಾಗಿದೆ. ಉಳಿದಂತೆ ಬೇರೆ ಕ್ಷೇತ್ರಗಳಿಗೆ ನಿರೀಕ್ಷಿತ ಹೆಸರುಗಳನ್ನೇ ಪ್ರಕಟಿಸಲಾಗಿದೆ.

Join Our Whatsapp Group

ಕಳೆದ ವಾರವಷ್ಟೇ ಎಲ್‌.ಶಿವರಾಮೇಗೌಡ ಹಾಗೂ ಅವರ ಪುತ್ರ ಚೇತನ್‌ ಗೌಡ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಎಲ್‌.ಆರ್‌.ಶಿವರಾಮೇಗೌಡ ಅವರೇ ಕಣಕ್ಕೆ ಇಳಿಯುತ್ತಾರೆ ಎಂದು ಬಿಂಬಿತವಾಗಿತ್ತು. ಆದರೆ, ಶಿವರಾಮೇಗೌಡ ಹಾಗೂ ಅವರ ಕುಟುಂಬ ಸದಸ್ಯರ ಮನವಿ ಮೇರೆಗೆ ಸುಧಾ ಶಿವಾರಾಮೇಗೌಡರನ್ನು ಕಣಕ್ಕಿಳಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ನಿರೀಕ್ಷೆಯಂತೆ ಕೆ.ಆರ್‌.ಪೇಟೆ ಕ್ಷೇತ್ರದಿಂದ ಸಚಿವ ಕೆ.ಸಿ.ನಾರಾಯಣಗೌಡ ಕಣಕ್ಕಿಳಿಯುತ್ತಿದ್ದಾರೆ. ಮಂಡ್ಯ ಕ್ಷೇತ್ರದಿಂದ ಅಶೋಕ್‌ ಜಯರಾಂ ಅವರಿಗೆ ಟಕೆಟ್‌ ಘೋಷಣೆ ಮಾಡಲಾಗಿದೆ. ಮೇಲುಕೋಟೆ ಕ್ಷೇತ್ರದಿಂದ ಡಾ.ಇಂದ್ರೇಶ್‌, ಶ್ರೀರಂಗಪಟ್ಟಣ ಕ್ಷೇತ್ರದಿಂದ ಎಸ್‌.ಸಚ್ಚಿದಾನಂದ, ಮದ್ದೂರು ಕ್ಷೇತ್ರದಿಂದ ಎಸ್‌.ಪಿ.ಸ್ವಾಮಿ, ಮಳವಳ್ಳಿ ಕ್ಷೇತ್ರದಿಂದ ಮುನಿರಾಜು ಅವರ ಹೆಸರು ಘೋಷಣೆ ಮಾಡಲಾಗಿದೆ.

ಹಿಂದಿನ ಲೇಖನಬಿಹಾರದಲ್ಲಿ 4.3 ತೀವ್ರತೆಯ ಭೂಕಂಪ
ಮುಂದಿನ ಲೇಖನನಜರ್ ಬಾದ್ ಅತಿಥಿಗೃಹದಲ್ಲಿ ಅನಧಿಕೃತರಿಗೆ ಕಾನೂನು ಬಾಹಿರವಾಗಿ ಕೊಠಡಿ ಬಾಡಿಗೆ: ಸೂಕ್ತ ಕ್ರಮಕ್ಕೆ ಆಗ್ರಹ