ಮನೆ ರಾಜಕೀಯ ಗೂಂಡಾಗಳಿಗೆ ಮುಸ್ಲಿಂ ನಾಯಕರು ಬುದ್ದಿ ಹೇಳಬೇಕು, ಇಲ್ಲವಾದರೆ ಸರ್ಕಾರ ಬುದ್ದಿ ಕಲಿಸಲಿದೆ: ಕೆ.ಎಸ್.ಈಶ್ವರಪ್ಪ

ಗೂಂಡಾಗಳಿಗೆ ಮುಸ್ಲಿಂ ನಾಯಕರು ಬುದ್ದಿ ಹೇಳಬೇಕು, ಇಲ್ಲವಾದರೆ ಸರ್ಕಾರ ಬುದ್ದಿ ಕಲಿಸಲಿದೆ: ಕೆ.ಎಸ್.ಈಶ್ವರಪ್ಪ

0

ಶಿವಮೊಗ್ಗ(Shivamogga): ಮುಸಲ್ಮಾನ ಗುಂಡಾಗಳನ್ನು ಕರೆದು ಮುಸ್ಲಿಂ ನಾಯಕರು ಬುದ್ದಿವಾದ ಹೇಳಬೇಕು. ಇಲ್ಲ ಅಂದರೆ ಗೂಂಡಾಗಳಿಗೆ ಸರ್ಕಾರ ಬುದ್ದಿ ಕಲಿಸಲಿದೆ ಎಂದು ಮಾಜಿ ಸಚಿವ ಕೆಎಸ್‌ ಈಶ್ವರಪ್ಪ ಹೇಳಿದ್ದಾರೆ.

ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಘಟನೆ ಮಾಡಿದ್ದು ಎಸ್ ಡಿಪಿಐ ಕಾರ್ಯಕರ್ತ. ಅವನ ಹೆಂಡತಿ ಕಾಂಗ್ರೆಸ್ ಪಾಲಿಕೆ ಸದಸ್ಯರು. ಎಸ್ ಡಿ ಪಿಐ ಬ್ಯಾನ್ ಮಾಡುವ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿದ್ದೇನೆ. ನಿನ್ನೆ ಸ್ಯಾಂಪಲ್ ತೋರಿಸಿದ್ದಾರೆ ಪೊಲೀಸರು. ಕೆಲ ಮುಸಲ್ಮಾನ ಸಮುದಾಯದ ಹಿರಿಯ ನಾಯಕರು ಮುಂಚಿನಿಂದಲೂ ಶಾಂತಿ ಕಾಪಾಡಲು ಯತ್ನಿಸುತ್ತಿದ್ದಾರೆ ಎಂದರು.

ಹಿಂದೂಗಳನ್ನ ಕೊಲೆ ಮಾಡುವ ಎಸ್ ಡಿಪಿಐನ ಮನಸ್ಥಿತಿ ಬದಲಾಗಿಲ್ಲ. ಕೇರಳದಿಂದಲೂ ಹೊರಗಡೆಯಿಂದ ಬಂದವರಿಂದಲೂ ಈ ರೀತಿ ಆಗ್ತಿದೆ. ನಮ್ಮ ಶಿವಮೊಗ್ಗದವರು ಶಾಂತಿಪ್ರಿಯರು. ಕೊಲೆ ಮಾಡುವಂತಹ ಬೆಳವಣಿಗೆ ಇರಲಿ, ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಮಾನ ಮಾಡುವುದಾಗಲಿ ಆಗಬಾರದು. ಕಠಿಣ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದೇನೆ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರ ಇದ್ದಾಗಲೂ ಮುವತ್ತೇಳು ಹಿಂದೂ ಕಾರ್ಯಕರ್ತರ ಹತ್ಯೆಗಳಾಗಿವೆ. ಆಗಲೂ ಎಲ್ಲವನ್ನೂ ಹಿಂದೂ ಕಾರ್ಯಕರ್ತರ ತಲೆಗೇ ಕಟ್ಟಲಾಯಿತು. ಕಾಂಗ್ರೆಸ್ ನವರಿಗೆ ಇಂತಹಾ ಗಲಭೆಗಳಾಗಬೇಕು. ಮುಸಲ್ಮಾನರ ಓಟು ಬೀಳಬೇಕು. ಪ್ರೇಮ್ ಸಿಂಗ್ ಎಂಬ ಯುವಕ ಈಗ ಆಸ್ಪತ್ರೆ ಯಲ್ಲಿ ಸಾವುಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಪ್ರೇಮ್ ಸಿಂಗ್ ಮೇಲೆ ಹಲ್ಲೆ ಮಾಡಿದವರನ್ನು ಪೋಲೀಸರು ಹುಡುಕಿ ಬಂಧಿಸಿದ್ದಾರೆ ಎಂದು ತಿಳಿಸಿದರು.

ಪೋಲೀಸ್ ಇಲಾಖೆ ವೈಫಲ್ಯ ಆಗಿಲ್ಲ. ಇವತ್ತೇ ಹುಡುಕಿ ಕಾಲಿಗೆ ಗುಂಡು ಹೊಡೆದಿದ್ದಾರೆ. ಇದನ್ನು ಕಾಂಗ್ರೆಸ್ ನವರಾಗಲಿ, ಕುಮಾರಸ್ವಾಮಿ ಆಗಲಿ ಖಂಡಿಸಬೇಕಿತ್ತು. ಮೊನ್ನೆ ಕುಮಾರಸ್ವಾಮಿ ಕೂಡಾ ಎರಡೂ ಪಕ್ಷಗಳು ನಾಟಕ ಆಡ್ತಾ ಇವೆ ಅನ್ನೋ ಮಾತು ಹೇಳಿದ್ದಾರೆ. ನರೇಂದ್ರ ಮೋದಿ ಅವರ ಆಡಳಿತವನ್ನು ಇಡೀ ವಿಶ್ವ ಒಪ್ಪಿದೆ, ಆದರೆ ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿಕೆಶಿ ಮಾತ್ರಾ ಒಪ್ಪುತ್ತಿಲ್ಲ ಎಂದು ಹೇಳಿದ್ದಾರೆ.

ಹಿಂದಿನ ಲೇಖನವಿವೇಕ ಸ್ಮಾರಕ ಜಾಗದಲ್ಲಿ ಎನ್ ಟಿ ಎಂ ಶಾಲೆ ನಿರ್ಮಿಸುವಂತೆ ಪ್ರತಿಭಟನೆ
ಮುಂದಿನ ಲೇಖನದಾಖಲೆ ಇದ್ದರೆ ಎಸ್’ಡಿಪಿಐ ವಿರುದ್ಧ ಕ್ರಮ ಕೈಗೊಳ್ಳಲಿ: ಸಿದ್ದರಾಮಯ್ಯ