ಏಪ್ರಿಲ್ 26ಕ್ಕೆ ಮೊದಲ ಹಂತದ ಚುನಾವಣೆ……
'ಕೈ' ಪರ ಪ್ರಚಾರದಲ್ಲಿದ್ದಾಗ ತಡೆದ ಬಿಜೆಪಿ ಕಾರ್ಯಕರ್ತರು….
ಹಿರಿಯ ನಾಗರಿಕರಿಗೆ ಹಾಗೂ ಅಂಗವಿಕಲರಿಗೆ ರಾಪಿಡೋ ವತಿಯಿಂದ ಸಿಹಿ ಸುದ್ದಿ
ಏಪ್ರಿಲ್ 26ಕ್ಕೆ ಏನೆಲ್ಲ ಲಭ್ಯವಿರುತ್ತದೆ….
ಲಂಡನ್ನಲ್ಲಿ ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ.
ಲೋಕಸಭಾ ಚುನಾವಣೆಗೆ ಬೆಂಗಳೂರಿನಲ್ಲಿ ನಿಷೇಧಾಗ್ನೆ ಜಾರಿ..
ಮನೆ ಮಾರಾಟಕ್ಕೆಮನೆ ಮಾರಾಟಕ್ಕೆ….
ಅಮೆರಿಕದಲ್ಲೂ ಕೂಡ ಹೆಚ್ಚಾಗುತ್ತಿದ್ದಾರೆ ಭಾರತೀಯರು.
27ರೂ. ಗೆ, 28000 ಸಾವಿರ ದಂಡ.
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.
ಮೈಸೂರು(Mysuru): ಗಿರವಿಗಿಟ್ಟಿದ್ದ ಚಿನ್ನಾಭರಣ ಸಮೇತ ಪರಾರಿಯಾಗಿದ್ದ ಆರೋಪಿ ನೇಮರಾಮ್ ಸಿರ್ವಿಯನ್ನು ಕುವೆಂಪು ನಗರ ಠಾಣೆಯ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ನಗರದ ವಿವೇಕಾನಂದ ನಗರದ ಮಾರುತಿ ಜ್ಯುವೆಲ್ಲರಿ ಹಾಗೂ ಬ್ಯಾಂಕರ್ಸ್’ನ ನೇಮರಾಮ್ ಸಿರ್ವಿ 10 ವರ್ಷಗಳಿಂದ ಅಂಗಡಿ ನಡೆಸುತ್ತಿದ್ದ. ಈತನನ್ನು ನಂಬಿ ಹಲವಾರು ಚಿನ್ನವನ್ನು ಗಿರವಿಗಿಟ್ಟಿದ್ದರು. ಹೊಸ ಆಭರಣಗಳನ್ನು ತಯಾರಿಸುವ ಸಂಬಂಧ ಮುಂಗಡ ಹಣ ನೀಡಿದ್ದರು.
ನ.9ರಂದು ಏಕಾಏಕಿ ಅಂಗಡಿಯ ಬಾಗಿಲುಮುಚ್ಚಿ ಆಭರಣ ಸಮೇತ ಆರೋಪಿ ಪರಾರಿಯಾಗಿದ್ದನು. ಅಂಗಡಿ ಕಟ್ಟಡದ ಮಾಲೀಕರಿಂದಲೂ ಹಣ ಪಡೆದು ವಂಚಿಸಿದ್ದ. ಈ ಕುರಿತು ಕುವೆಂಪುನಗರ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದವು. ರಾಜಸ್ಥಾನಕ್ಕೆ ತೆರಳಿದ ಆರೋಪಿ ಪಾಲಿ ಜಿಲ್ಲೆಯ ಒಪೊರಿಯಲ್ಲಿ ಕೃಷಿ ಕೆಲಸ ಮಾಡುತ್ತಿದ್ದ.
ಆರೋಪಿ ಬಂಧನ ಸಂಬಂಧ ಕುವೆಂಪು ನಗರ ಠಾಣೆಯ ಪೊಲೀಸರ ತಂಡವು ರಾಜಸ್ಥಾನಕ್ಕೆ ತೆರಳಿತ್ತು. ಆತನ ಊರಿನಲ್ಲಿ ಹುಡುಕಾಟ ನಡೆಸಿತ್ತು. ಪೊಲೀಸ್ ತಂಡವು ಊರಿಗೆ ಬಂದಿರುವುದನ್ನು ಸ್ನೇಹಿತರ ಮೂಲಕ ತಿಳಿದ ಆರೋಪಿ ಅಲ್ಲಿಂದ ಕೂಡ ಪರಾರಿಯಾಗಿ ಬೆಂಗಳೂರಿಗೆ ಬಂದಿದ್ದ. ಅಲ್ಲಿಯೂ ಬೆನ್ನತ್ತಿ ಆರೋಪಿಯನ್ನು ಬಂಧಿಸಿ, ನಗರಕ್ಕೆ ಕರೆತಂದಿದ್ದಾರೆ.
ನೇಮಿರಾಜ್ ಬಂಧನದ ಸುದ್ದಿ ತಿಳಿಯುತ್ತಿದ್ದಂತೆಯೇ, ಆಭರಣ ಗಿರವಿಗಿಟ್ಟ ಹಲವು ಮಂದಿ ಕುವೆಂಪು ನಗರ ಠಾಣೆಗೆ ಬಂದು ದೂರು ನೀಡಲು ಆರಂಭಿಸಿದ್ದಾರೆ. ಹೊಸ ಆಭರಣ ತಯಾರಿಕೆಗೆ ಮುಂಗಡವಾಗಿ 30 ಮಂದಿ ಹಣ ನೀಡಿದ್ದು ಗೊತ್ತಾಗಿದೆ. ತನಿಖೆ ನಡೆಯುತ್ತಿದ್ದು, ವಂಚನೆಯ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ ಎಂದು ತಿಳಿಸಿದರು.