ಮನೆ ರಾಜ್ಯ ಆಟೋ – ದ್ವಿಚಕ್ರ ವಾಹನ ನಡುವೆ ಅಪಘಾತ: ಮೂವರ ಸ್ಥಿತಿ ಗಂಭೀರ

ಆಟೋ – ದ್ವಿಚಕ್ರ ವಾಹನ ನಡುವೆ ಅಪಘಾತ: ಮೂವರ ಸ್ಥಿತಿ ಗಂಭೀರ

0

ದಾವಣಗೆರೆ(Davanagere): ಆಟೋ ಮತ್ತು ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಭರಮಸಮುದ್ರ ಗ್ರಾಮದ ಕ್ರಾಸ್ ಬಳಿ ಬುಧವಾರ ತಡರಾತ್ರಿ ಸಂಭವಿಸಿದೆ.

ಜಗಳೂರಿನಿಂದ ಭರಮಸಮುದ್ರ ಮಾರ್ಗವಾಗಿ ಕಲ್ಲೇದೇವರಪುರಕ್ಕೆ ಅಪ್ಪೆ ಆಟೋ ತೆರಳುತ್ತಿದ್ದಾಗ ಭರಮಸಮುದ್ರ ಕ್ರಾಸ್​ ಬಳಿ ಬೈಕ್​’ಗೆ ಡಿಕ್ಕಿ ಹೊಡೆದಿದೆ.

ಪರಿಣಾಮ ಬೈಕ್​’ನಲ್ಲಿದ್ದ ಇಬ್ಬರು ಹಾಗೂ ಆಟೋದಲ್ಲಿದ್ದ ಓರ್ವನ ಸ್ಥಿತಿ ಗಂಭೀರವಾಗಿದ್ದು, ಜಗಳೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಆಸ್ಪತ್ರೆಗೆ ಆಂಬ್ಯುಲೆನ್ಸ್ ಮೂಲಕ ಸಾಗಿಸಲಾಯಿತು.

ಗಂಭೀರವಾಗಿ ಗಾಯಗೊಂಡವರನ್ನು ಚಿತ್ರದುರ್ಗ ತಾಲೂಕಿನ ಹುಲ್ಕೇಹಾಳ್ ಗ್ರಾಮದ ಭರತ್ (25), ಮುದ್ದಾಪುರ ಗ್ರಾಮದ ಮಧು (26), ಕಲ್ಲೇದೇವರಪುರದ ಕಲ್ಲೇಶ್(32) ಎಂದು ತಿಳಿದುಬಂದಿದೆ. ಅಟೋದಲ್ಲಿದ್ದ ಮತ್ತೊಬ್ಬ ಕೂಡ್ಲಿಗಿ ತಾಲೂಕಿನ ಲೋಕಿಕೆರೆ ಗ್ರಾಮದ ಕೊಲ್ಲಪ್ಪ (43) ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹಿಂದಿನ ಲೇಖನಹವಮಾನ ವೈಪರೀತ್ಯದಿಂದ ಶೀತಜ್ವರ, ತೀವ್ರ ಉಸಿರಾಟದ ಸಮಸ್ಯೆ ಶೇ.15 ರಷ್ಟು ಹೆಚ್ಚಳ
ಮುಂದಿನ ಲೇಖನಮೈಸೂರು: ಗಿರವಿಗಿಟ್ಟಿದ್ದ ಚಿನ್ನಾಭರಣ ಸಮೇತ ಪರಾರಿಯಾಗಿದ್ದ ಆರೋಪಿಯ ಬಂಧನ