ಮನೆ ಸ್ಥಳೀಯ ಮೈಸೂರು: ವಿದ್ಯುತ್ ಅವಘಡದಲ್ಲಿ ಚೆಸ್ಕಾಂ ಸಿಬ್ಬಂದಿ ಸಾವು

ಮೈಸೂರು: ವಿದ್ಯುತ್ ಅವಘಡದಲ್ಲಿ ಚೆಸ್ಕಾಂ ಸಿಬ್ಬಂದಿ ಸಾವು

0

ಮೈಸೂರು: ಕೆಲಸ ಮಾಡುವಾಗ ಸಂಭವಿಸಿದ ವಿದ್ಯುತ್​ ಅವಘಡದಲ್ಲಿ ಚೆಸ್ಕಾಂ ಸಿಬ್ಬಂದಿ ಮೃತಪಟ್ಟಿರುವ ಘಟನೆ ಮೈಸೂರು ತಾಲೂಕಿನ ಯಡಹಳ್ಳಿ ಗ್ರಾಮದ ಬಳಿ ನಡೆದಿದೆ.

ಸತೀಶ್ (52) ಮೃತ ಚೆಸ್ಕಾಂ ಸಿಬ್ಬಂದಿ.

ಇವರು ಮೈಸೂರು ಜಿಲ್ಲೆಯ ಕೆಆರ್​ ನಗರ ತಾಲೂಕಿನ ಕೆಸ್ತೂರು ಕೊಪ್ಪಲು ನಿವಾಸಿಯಾಗಿದ್ದು, 24 ವರ್ಷದಿಂದ ಚೆಸ್ಕಾಂನಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ಇನ್ನು ಮೇಲಾಧಿಕಾರಿಗಳ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ ಎಂದು ಸತೀಶ್ ಕುಟುಂಬದವರು ಆರೋಪಿಸಿದ್ದು, ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಈ ಕುರಿತು ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಹಿಂದಿನ ಲೇಖನಬೈಪೋಲಾರ್ ಎಫೆಕ್ಟಿವ್ ಡಿಸಾರ್ಡರ್
ಮುಂದಿನ ಲೇಖನಶಕ್ತಿ ಯೋಜನೆಗೆ ಸ್ಪಂದನೆ: 5675 ಹೊಸ ಕೆಎಸ್’ಆರ್’ಟಿಸಿ ಬಸ್‌ ಖರೀದಿಸಲು ಸಿಎಂ ಸಿದ್ದರಾಮಯ್ಯ ಸೂಚನೆ