ಮನೆ ಅಪರಾಧ ಮೈಸೂರು: ಗ್ರಾಹಕರ ಸೋಗಿನಲ್ಲಿ ಬಂದು ಬಾಡಿಗೆ ಕಾರು ಕಳ್ಳತನ

ಮೈಸೂರು: ಗ್ರಾಹಕರ ಸೋಗಿನಲ್ಲಿ ಬಂದು ಬಾಡಿಗೆ ಕಾರು ಕಳ್ಳತನ

0

ಮೈಸೂರು: ಖದೀಮರು ಗ್ರಾಹಕರ ಸೋಗಿನಲ್ಲಿ ಬಂದು ಚಾಲಕನಿಗೆ ಚಾಕು ತೋರಿಸಿ ಬಾಡಿಗೆ ಕಾರು ಕದ್ದೋಯ್ದಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಅಹಲ್ಯ ಗ್ರಾಮದ ಬಳಿ ನಡೆದಿದೆ.

Join Our Whatsapp Group

ಅಪ್ಸರ್ ಪಾಷಾ ಎಂಬುವವರಿಗೆ ಸೇರಿದ ಟಾಟಾ ಇಂಡಿಕಾ ಕಾರನ್ನ ಕಳ್ಳತನ ಮಾಡಿದ್ದಾರೆ. ನಂಜನಗೂಡಿನಿಂದ ಹುಲ್ಲಹಳ್ಳಿಗೆ ಹೋಗಬೇಕೆಂದು ಬಾಡಿಗೆ ಕಾರಿನಲ್ಲಿ ಇಬ್ಬರು ಯುವಕರು ಹೊರಟಿದ್ದರು.

ಹುಲ್ಲಹಳ್ಳಿಗೆ ಹೋಗುವ ಮಾರ್ಗ ಮಧ್ಯೆ ಚಾಲಕನಿಗೆ ಚಾಕು ತೋರಿಸಿ ಆತನ ಬಳಿ ಇದ್ದ ಮೊಬೈಲ್, ವಾಚ್, ನಗದು ಜೊತೆಗೆ ಕಾರನ್ನು ಕಿತ್ತುಕೊಂಡು ಇಬ್ಬರು ಖದೀಮರು ಪರಾರಿಯಾಗಿದ್ದಾರೆ.

ಈ ಕುರಿತು ಹುಲ್ಲಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನನ್ಯಾಯಾಲಯದ ಆದೇಶ ಜಾರಿಗೊಳಿಸಲಾಗದಿದ್ದರೆ ಚುನಾವಣಾ ಆಯುಕ್ತರು ಹುದ್ದೆ ತ್ಯಜಿಸಲಿ: ಕಲ್ಕತ್ತಾ ಹೈಕೋರ್ಟ್ ಕೆಂಡಾಮಂಡಲ
ಮುಂದಿನ ಲೇಖನಇಂದಿನಿಂದ 108MP ಕ್ಯಾಮೆರಾದ ಈ ಫೋನ್ ಖರೀದಿಗೆ ಲಭ್ಯ: ಬೆಲೆ, ಫೀಚರ್ಸ್ ಮಾಹಿತಿ ತಿಳಿಯಲು ಈ ಸುದ್ದಿ ಓದಿ