ಮನೆ ಅಪರಾಧ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಓ ಲಿಂಗಾಚಾರ್

ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಓ ಲಿಂಗಾಚಾರ್

0

ದಾವಣಗೆರೆ: ದಾವಣಗೆರೆಯ ಕಕ್ಕರಗೋಳ ಗ್ರಾಮ ಪಂಚಾಯಿತಿ ಪಿಡಿಓ ಲಂಚ ಪಡೆಯುವ ಸಮಯದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಕಕ್ಕರಗೋಳ ಗ್ರಾಮ ಪಂಚಾಯಿತಿ ಪಿಡಿಓ ಲಿಂಗಾಚಾರ್ ರೈತರೊಬ್ಬರಿಗೆ ಇ ಸ್ವತ್ತು ಮಾಡಿಸಿಕೊಡುವ ಸಲುವಾಗಿ 2 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಅಂತೆಯೇ ನಗರದ ಕೊಂಡಜ್ಜಿ ರಸ್ತೆ ಆರ್’ಟಿಒ ಕಚೇರಿ ಬಳಿ ಮಂಜುನಾಥ್ ಎಂಬ ರೈತನಿಂದ 2 ಸಾವಿರ ರೂ ಪಡೆದುಕೊಳ್ಳುವ ವೇಳೆ ಲೋಕಾಯುಕ್ತ ಎಸ್.ಪಿ ಎಂ.ಎಸ್.ಕೌಲಾಪುರ ನೇತೃತ್ವದಲ್ಲಿ ಡಿವೈಎಸ್’ಪಿ ರಾಮಕೃಷ್ಣ ಹಾಗೂ ಇನ್ಸ್’ಪೆಕ್ಟರ್ ಆಂಜನೇಯ ಅವರಿದ್ದ ತಂಡ ದಾಳಿ ನಡೆಸಿ ಅಧಿಕಾರಿಯನ್ನು ಬಂಧಿಸಿದ್ದಾರೆ.

ಹಿಂದಿನ ಲೇಖನನಾಳೆಯಿಂದಲೇ‌ ಆರ್’ಬಿಐ ನಿಂದ ಡಿಜಿಟಲ್ ರೂಪಾಯಿ ಪ್ರಾಯೋಗಿಕ ಆರಂಭ
ಮುಂದಿನ ಲೇಖನದಾವಣಗೆರೆಯಲ್ಲಿ ಸರಣಿ ಅಪಘಾತ: ಓರ್ವ ಸಾವು, 9 ಮಂದಿಗೆ ಗಾಯ