ಮನೆ ಸುದ್ದಿ ಜಾಲ ಬೆಂಗಳೂರು ವಿವಿ ಘಟಿಕೋತ್ಸವ ಮುಂದೂಡಿಕೆ

ಬೆಂಗಳೂರು ವಿವಿ ಘಟಿಕೋತ್ಸವ ಮುಂದೂಡಿಕೆ

0

ಬೆಂಗಳೂರು(Bengaluru): ಏಪ್ರಿಲ್ 8 ರಂದು ನಡೆಯಬೇಕಿದ್ದ 56ನೇ ಬೆಂಗಳೂರು ವಿವಿ ಘಟಿಕೋತ್ಸವ(Bangalore University Convocation) ವನ್ನು ಏಪ್ರಿಲ್ ಕೊನೆ ವಾರದಲ್ಲಿ ನಡೆಸಲು ನಿರ್ಧಾರ ಮಾಡಲಾಗಿದೆ.

ಇಷ್ಟು ದಿನ ವಿವಿ ಕುಲಪತಿ ವೇಣುಗೋಪಾಲ್ ನೇಮಕ ಪ್ರಕರಣ ವಿಚಾರ ಕೋರ್ಟ್ ನಲ್ಲಿತ್ತು. ಸದ್ಯ ಇದೀಗ ಕುಲಪತಿ ನೇಮಕ ಪ್ರಕರಣ ಇತ್ಯರ್ಥವಾಗಿದೆ. ಈ ಹಿನ್ನೆಲೆಯಲ್ಲಿ ಘಟಿಕೋತ್ಸವ ತಯಾರಿಕೆಗೆ ಸಮಯಾವಕಾಶ ಬೇಕಾದ ಕಾರಣ ಏಪ್ರಿಲ್ ಕೊನೆ ವಾರದಲ್ಲಿ ಘಟಿಕೋತ್ಸವ ನಡೆಸಲು ನಿರ್ಧಾರ ಮಾಡಲಾಗಿದೆ. ಶೀಘ್ರವೇ ದಿನಾಂಕ ಪ್ರಕಟಿಸುವುದಾಗಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ.

ಉಕ್ರೇನ್‌ನಿಂದ ವಾಪಸಾದ 17 MBBS ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಮಾಜಿ ಸಚಿವ ಎಂ.ಬಿ.ಪಾಟೀಲ್ ಸಹಾಯದ ಭರವಸೆ ನೀಡಿದ್ದಾರೆ. ವಿದ್ಯಾರ್ಥಿಗಳಿಗೆ BLDE ಕಾಲೇಜಿನಿಂದ ಸಹಕಾರ ನೀಡುತ್ತೇವೆ ಎಂದು ವಿಜಯಪುರದಲ್ಲಿ ಮಾಜಿ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ನಿನ್ನೆ ತಮ್ಮನ್ನು ಭೇಟಿಯಾದ 17 ಜನ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಸಹಾಯದ ಭರವಸೆ ನೀಡಿದ್ದಾರೆ. ವಿದ್ಯಾರ್ಥಿಗಳ ಅಧ್ಯಯನಕ್ಕೆ ಸಹಾಯ, ಸಹಕಾರ ಮಾಡೋದಾಗಿ ಹೇಳಿದ್ರು. ಬಿಎಲ್ಡಿಇ ಮೆಡಿಕಲ್ ವೈದ್ಯಕೀಯ ಕಾಲೇಜಿನಲ್ಲಿ ಗ್ರಂಥಾಲಯ ಬಳಕೆಗೆ ಸೂಚನೆ ನೀಡಿದ್ದಾರೆ. ಉಕ್ರೇನ್‌ನಲ್ಲಿರುವ ಪಠ್ಯಕ್ರಮದಂತೆಯೇ ವಿದ್ಯಾಭ್ಯಾಸ ನೀಡ್ತೇವೆ. 17 ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಉಪನ್ಯಾಸಕರ ನಿಯೋಜನೆ ಮಾಡಲಾಗುತ್ತೆ ಎಂದು ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

ನಿನ್ನೆ ವಿದ್ಯಾರ್ಥಿಗಳು ನನ್ನನ್ನ ಭೇಟಿ ಮಾಡಿದ್ದಾರೆ. ಅಧ್ಯಾಯನ ಅಪೂರ್ಣವಾಗಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಮಾನವೀಯ ದೃಷ್ಟಿಯಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಕಾರ ನೀಡುತ್ತೇವೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರ ಮೂಲಕವು ಕೇಂದ್ರದ ಗಮನಕ್ಕೆ ಈ ವಿಚಾರ ತರಲು ನಾನು ಪ್ರಯತ್ನಿಸುವೆ. ಕೇಂದ್ರ ಸರ್ಕಾರವೇ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣದ ವ್ಯವಸ್ಥೆ ಮಾಡಬೇಕಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಹಿಂದಿನ ಲೇಖನಸರೋಜಿನಿ ನಾಯ್ಡು ಬಯೋಪಿಕ್​ನಲ್ಲಿ ಶಾಂತಿಪ್ರಿಯಾ, ಸೋನಲ್​
ಮುಂದಿನ ಲೇಖನಲಡಾಖ್  ಭಾಗದ ವಿದ್ಯುತ್ ಸರಬರಾಜು ಕೇಂದ್ರಗಳ ಮೇಲೆ ಚೀನಾ ಸೈಬರ್ ದಾಳಿ