ಒಮ್ಮೆ ಗುರುಗಳು ಹುರುಪಿನಲ್ಲಿದ್ದರು. ಇದನ್ನು ನೋಡಿದ ಅವರ ಶಿಷ್ಯರು ಭಗವಂತನ ಅನ್ವೇಷಣೆಯಲ್ಲಿ ಅವರು ಯಾವ ಹಂತಗಳನ್ನು ದಾಟಬೇಕಾಯಿತೆಂದು ಕೇಳಿದರು. “ ಭಗವಂತ ನನ್ನನ್ನು ಕೈಹಿಡಿದು ಕರ್ಮಭೂಮಿಯಲ್ಲಿ ಮುನ್ನೆಡೆಸಿದ. ಅಲ್ಲಿ ನಾನು ಹಲವಾರು ವರ್ಷಗಳ ಕಾಲ ಇದ್ದೆ. ನಂತರ ಅವನು ನನ್ನನ್ನು ದುಃಖ ಭೂಮಿಗೆ ಕೊಂಡೊಯ್ದ. ಅಲ್ಲಿ ನನ್ನ ಹೃದಯದಲ್ಲಿದ್ದ ಎಲ್ಲಾ ಅನಗತ್ಯ ಬಂಧನಗಳು ಕಳಚುವವರೆಗೆ ಇದ್ದೆ. ಆಗ ಪ್ರೇಮದ ವಶಕ್ಕೆ ಬಂದೆ. ಅದು ನನ್ನಲ್ಲಿ ಅಳಿದುಳಿದ ನಾನು ಎಂಬುದನ್ನು ತನ್ನ ಉರಿವ ಜ್ವಾಲೆಯಿಂದ ಸುಟ್ಟುಹಾಕಿತು. ನಂತರ ಭಗವಂತ ನನ್ನ ಆಶ್ಚಾರ್ಯಚಕಿತ ಕಣ್ಣುಗಳಿಗೆ ಬದುಕು ಮತ್ತು ಸಾವುಗಳ ರಹಸ್ಯವನ್ನು ಪ್ರಕಟಗೊಳಿಸಿದ ಮೌನಲೋಕಕ್ಕೆ ನನ್ನನ್ನು ಕರೆದುಕೊಂಡು.”
“ ಅದು ನಿಮ್ಮ ಅನ್ವೇಷಣೆಯ ಕೊನೆಯ ಹಂತವಾಗಿತ್ತೇ ? “ ಎಂದು ಶಿಷ್ಯರು ಕೇಳಿದರು.
“ಇಲ್ಲ” ಎಂದು ಗುರುಗಳು ಹೇಳುತ್ತಾ ತಮ್ಮ ಮಾತುಗಳನ್ನು ಮುಂದುವರೆಸಿದರು.
ಪ್ರಶ್ನೆಗಳು : 1. ಗುರುಗಳು ತಮ್ಮ ಶಿಷ್ಯರಿಗೆ ಇನ್ನೇನು ಹೇಳಿದರು ? 2. ಈ ಕಥೆಯ ನೀತಿಯೇನು ?
ಉತ್ತರಗಳು : 1. “ಒಂದುದಿನ ಭಗವಂತ ಕೇಳಿದನು: ʼನಾನು ಇಂದು ನಿನ್ನನ್ನು ದೇವಾಲಯದ ಆಂತರಧಾಮಕ್ಕೆ ಅಂದರೆ ಭಗವಂತನ ಹೃದಯಕ್ಕೆ ಕರೆದೊಯ್ಯುವೆ.ʼ ನನ್ನನ್ನು ಹಾಸ್ಯಲೋಕಕ್ಕೆ ಕರೆದೊಯ್ಯಲಾಯಿತು.
2.ನೀವು ನಗುವಾಗ ಸಂತೋಷದಿಂದಿರುತ್ತಿರಿ, ನಿಮಗೆ ಸಂತೋಷವಾಗಿದ್ದಾಗ ದ್ವೇಷ, ಅಸಮಧಾನ, ಅಸೂಯೆ, ಅಥವಾ ಇತರೆ ನಕಾರಾತ್ಮಕ ಭಾವನೆಗಳು ಇರುವುದಿಲ್ಲ. ನಕಾರಾತ್ಮಕ ಭಾವನೆಗಳಿಲ್ಲದೇ ಕಡೆ ಪ್ರೇಮ ಹಾಗೂ ಅನುಕಂಪ ನೆಲೆಸುತ್ತದೆ. ಇದು ಆಧ್ಯಾತ್ಮಿಕತೆಯ ಕೊನೆ ಹಂತ. ಇದನ್ನು ಯಾರಾದರೂ ಕೇವಲ ನಗು, ನಗು, ನಗುವಿನಿಂದಲೇ ಸುಲಭವಾಗಿ ಸಾಧಿಸಬಹುದು.
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
ಮಿನಿ ಉದ್ಯೋಗ ಮೇಳ..!
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.