ಯೋಗದಿಂದ ಬಹಳಷ್ಟು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಸರ್ವಾಂಗಾಸನ ಯೋಗದಲ್ಲಿ ಬಹಳ ಪ್ರಯೋಜನಕಾರಿಯಾದ ಯೋಗಾಸನವಾಗಿದೆ. ಇದು ದೇಹದ ಎಲ್ಲ ಭಾಗಗಳಿಗೆ ಪ್ರಯೋಜನಕಾರಿಯಾಗಿದೆ. ಈ ಯೋಗಾಸನ ಮಾಡುವುದರಿಂದ ಪುರುಷರು ಮತ್ತು ಮಹಿಳೆಯರು ಇಬ್ಬರೂ ಪ್ರಯೋಜನ ಪಡೆಯಬಹುದು. ಸರ್ವಾಂಗಾಸನವನ್ನು ಮಾಡುವ ವಿಧಾನ ಯಾವುದು, ಪ್ರಯೋಜನಗಳು ಯಾವುವು ತಿಳಿಯಿರಿ.
ಸರ್ವಾಂಗಾಸನವು ಸಂಸ್ಕೃತ ಪದವಾಗಿದ್ದು, ‘ಸರ್ವ್’ ಎಂದರೆ ಎಲ್ಲ ಎಂದೂ, ‘ಅಂಗ’ ಎಂದರೆ ನಿಮ್ಮ ದೇಹದ ಎಲ್ಲ ಭಾಗಗಳು ಎಂದೂ, ‘ಆಸನ’ ಎಂದರೆ ಭಂಗಿಯೆಂದೂ ಆಗಿದೆ. ಈ ಅಸನ ಇಡೀ ದೇಹವನ್ನು ಒಳಗೂಳ್ಳುತ್ತದೆ. ಇದರಿಂದ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನಗಳಿವೆ. ಅವುಗಳ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.
ಸರ್ವಾಂಗಾಸನ ಮಾಡುವುದು ಹೇಗೆ?
ಸರ್ವಾಂಗಾಸನ ಯೋಗವನ್ನು ಇಂಗ್ಲಿಷ್ ನಲ್ಲಿ ಶೋಲ್ಡರ್ ಸ್ಟ್ಯಾಂಡ್ ಎಂದೂ ಕರೆಯಲಾಗುತ್ತದೆ.
ಮೊದಲು ಯೋಗ ಚಾಪೆಯ ಮೇಲೆ ಬೆನ್ನ ಮೇಲೆ ಮಲಗಿ ಎರಡೂ ಕೈಗಳನ್ನು ದೇಹದ ಎರಡೂ ಬದಿಗಳಲ್ಲಿ ನೆಲದ ಮೇಲೆ ಇರಿಸಿ.
ಈಗ ಎರಡೂ ಕಾಲುಗಳನ್ನು ಗಾಳಿಯಲ್ಲಿ ಮೇಲಕ್ಕೆ ಎತ್ತಿ.
ಪಾದಗಳಿಂದ ಸೊಂಟದವರೆಗೆ ನೆಲದಿಂದ ನಿಧಾನವಾಗಿ ಮೇಲೆತ್ತಲು ಪ್ರಯತ್ನಿಸಿ.
ಈಗ ಕಾಲಿನ ಉಗುರುಗಳನ್ನು ಆಕಾಶದತ್ತ ಮುಖ ಮಾಡಿ. ಎರಡೂ ಅಂಗೈಗಳಿಂದ ಸೊಂಟವನ್ನು ಬೆಂಬಲಿಸಿ.
ಈ ರೀತಿಯಾಗಿ ನಿಮ್ಮ ಇಡೀ ದೇಹವು ಆಕಾಶದ ಕಡೆಗೆ ಏರಬೇಕು ಮತ್ತು ಸಂಪೂರ್ಣ ದೈಹಿಕ ತೂಕವು ಭುಜಗಳ ಮೇಲೆ ಬರಬೇಕು.
ಈ ಸ್ಥಿತಿಯಲ್ಲಿ ಕೆಲವು ನಿಮಿಷಗಳ ಕಾಲ ಹಾಗೆ ಇರಿ. ಇದನ್ನು ಮತ್ತೆ ಮತ್ತೆ ಮುಂದುವರೆಸಿ.
ಸರ್ವಾಂಗಾಸನ ಪ್ರಯೋಜನಗಳು
ಸರ್ವಾಂಗಾಸನ ಮಾಡಿದರೆ ಈ ಕೆಳಗಿನ ಪ್ರಯೋಜನಗಳನ್ನು ಪಡೆಯಬಹುದು. ಆದರೆ, ಯಾರಿಗಾದರೂ ಹೃದ್ರೋಗ ಸ್ಲಿಪ್ ಡಿಸ್ಕ್, ಕುತ್ತಿಗೆ ನೋವು, ಥೈರಾಯ್ಡ್ ಸಮಸ್ಯೆ, ಅಧಿಕ ರಕ್ತದೊತ್ತಡ, ಗರ್ಭಧಾರಣೆ ಅಥವಾ ಋತುಚಕ್ರವಿದ್ದರೆ, ಈ ಯೋಗಾಸನ ಮಾಡುವ ಮೊದಲು ತಜ್ಞರನ್ನು ವಿಚಾರಿಸಿ.
ಥೈರಾಯ್ಡ್ ಗ್ರಂಥಿಗಳನ್ನು ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ ಮತ್ತು ಅವುಗಳ ಕಾರ್ಯವನ್ನು ಸಾಮಾನ್ಯಗೊಳಿಸುತ್ತದೆ.
ಸರ್ವಾಂಗಾಸನ ಮಾಡುವುದರಿಂದ ಕೈಗಳು ಮತ್ತು ಭುಜಗಳು ಬಲಗೊಳ್ಳುತ್ತವೆ ಮತ್ತು ಬೆನ್ನು ಮೂಳೆಯು ಹೊಂದಿಕೊಳ್ಳುವಂತೆ ಮಾಡುತ್ತದೆ.
ಮೆದುಳಿನಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಸರ್ವಾಂಗಾಸನವು ಇಡೀ ದೇಹದಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸಲು ಉತ್ತಮವಾಗಿದೆ. ಏಕೆಂದರೆ ಇದು ಮೆದುಳಿಗೆ ಹೆಚ್ಚಿನ ರಕ್ತದಿಂದ ಪೋಷಣೆ ಯನ್ನು ಮಾಡುತ್ತದೆ. ಹೃದಯದ ಸ್ನಾಯುಗಳನ್ನು ಹಿಗ್ಗಿಸುವ ಮೂಲಕ ರಕ್ತದ ಹರಿವನ್ನು ಸುಧಾರಿಸುತ್ತದೆ.
ಸರ್ವಾಂಗಸನ ದೇಹದ ಎಲ್ಲಾ ಅಂಗಗಳನ್ನು ಒಳಗೊಳ್ಳುತ್ತದೆ. ಮಲಬದ್ಧತೆ, ಅಜೀರ್ಣ ಮತ್ತು ವೆರಿಕೋಸ್ ರಕ್ತನಾಳಗಳ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದನ್ನು ನಿಯಮಿತವಾಗಿ ಮಾಡುವುದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳು ನಿವಾರಣೆಯಾಗುತ್ತದೆ.
ಬೆನ್ನು ನೋವಿನಿಂದ ಬಳಲುತ್ತಿರುವ ಜನರು ಈ ಆಸನದಿಂದ ಪ್ರಯೋಜನ ಪಡೆಯಬಹುದು ಏಕೆಂದರೆ ಇದು ಒಬ್ಬರ ಬೆನ್ನುಮೂಳೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ನೀವು ಸರಿಯಾದ ತಂತ್ರದಿಂದ ನಿಯಮಿತವಾಗಿ ಮಾಡಿದರೆ ಇದು ಬೆನ್ನು ನೋವನ್ನು ಸಹ ಗುಣಪಡಿಸುತ್ತದೆ.ಇದು ಬೆನ್ನು ನೋವಿಗೆ ಉತ್ತಮ ಪರಿಹಾರ ನೀಡುತ್ತದೆ.
ಕೆ ಎಸ್ ಆರ್ ಟಿ ಸಿ. ಚಾಲಕರ ಹುದ್ದೆಗೆ ಅರ್ಜಿ ಆಹ್ವಾನ
ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ, "ಉದ್ಯೋಗಿನಿ" ಯೋಜನೆ!
ವಸ್ತು ಪ್ರದರ್ಶನ ಪ್ರಾಧಿಕಾರದಲ್ಲಿ ರಕ್ತ ಪಿಪಾಸುಗಳು…
ಮಂತ್ರಿಯಾಗಿ ಪವನ್ ಕಲ್ಯಾಣ ಪ್ರಮಾಣವಚನ
ಮಾಧ್ಯಮ ರಂಗದ ಭೀಷ್ಮ ರಾಮೋಜಿ ರಾವ್ ನಿಧನ.!
ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಪೈ.ಲಿ.ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆರ್ಜಿ ಆಹ್ವಾನ
ಡಿವೋಸ್ ಮೊರೆ ಹೋದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ!
PM ಮೋದಿಯವರು ಸಂವಿಧಾನ್ ಸದನ್ಗೆ ಆಗಮಿಸುತ್ತಿದ್ದಂತೆ ಮೋದಿ ಮೋದಿ ಘೋಷಣೆ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.