ಮನೆ ರಾಜ್ಯ ಲೈಂಗಿಕ ದೌರ್ಜನ್ಯ ಪ್ರಕರಣ: ಸ್ಥಳ ಮಹಜರ್‌ ಗೆ ಮುರುಘಾ ಶರಣರನ್ನು ಮಠಕ್ಕೆ ಕರೆತಂದ ಪೊಲೀಸರು

ಲೈಂಗಿಕ ದೌರ್ಜನ್ಯ ಪ್ರಕರಣ: ಸ್ಥಳ ಮಹಜರ್‌ ಗೆ ಮುರುಘಾ ಶರಣರನ್ನು ಮಠಕ್ಕೆ ಕರೆತಂದ ಪೊಲೀಸರು

0

ಚಿತ್ರದುರ್ಗ (Chitradurga): ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಲ್ಲಿ ಬಂಧಿತರಾಗಿರುವ ಶಿವಮೂರ್ತಿ ಮುರುಘಾ ಶರಣರನ್ನು ಪೊಲೀಸರು ಸ್ಥಳ ಮಹಜರ್‌ಗೆ ಮುರುಘಾ ಮಠಕ್ಕೆ ಕರೆತಂದರು.

ಡಿವೈಎಸ್‌ಪಿ ಕಚೇರಿಯಿಂದ ರಾಷ್ಟ್ರೀಯ ಹೆದ್ದಾರಿ 48ರ ಮಾರ್ಗವಾಗಿ ಶರಣರನ್ನು ಮಠಕ್ಕೆ ಕರತರಲಾಯಿತು. ಮಠದ ಬಿಡಾರ, ಹಾಸ್ಟೆಲ್ ಗೆ ಕರೆದೊಯ್ದು ಮಹಜರು ಮಾಡಲಾಗುತ್ತಿದೆ. ಮಹಜರು ಸಂದರ್ಭದಲ್ಲಿ ಭಕ್ತರು, ಪ್ರವಾಸಿಗರ ಪ್ರವೇಶವನ್ನು ಪೊಲೀಸರು ನಿರ್ಬಂಧಿಸಿದ್ದಾರೆ.

ಪೊಲೀಸ್ ವಶದಲ್ಲಿರುವ ಆರೋಪಿಯನ್ನು ತನಿಖಾಧಿಕಾರಿಗಳು ಶುಕ್ರವಾರ ರಾತ್ರಿಯಿಂದ ವಿಚಾರಣೆಗೆ ಒಳಪಡಿಸಿದ್ದಾರೆ. ಭಾನುವಾರ ವಿಚಾರಣೆ ಮುಂದುವರಿಸಿದ ತನಿಖಾ ತಂಡ ವಿಚಾರಣೆ ಬಳಿಕ ಮುರುಘಾ ಮಠಕ್ಕೆ ಕರೆತಂದರು.

ಹಿಂದಿನ ಲೇಖನರಾಷ್ಟ್ರೀಯ ಸಿನಿಮಾ ದಿನ: ಸೆ.16 ರಂದು ಮಲ್ಟಿಫ್ಲೆಕ್ಸ್‌ ಗಳಲ್ಲಿ 75 ರೂ. ಗೆ ಟಿಕೆಟ್‌
ಮುಂದಿನ ಲೇಖನಚಾಮರಾಜನಗರ: ವ್ಹೀಲಿಂಗ್ ವಿಚಾರವಾಗಿ ಎರಡು ಕೋಮುಗಳ ನಡುವೆ ಗಲಾಟೆ; ಆರು ಮಂದಿ ಪೊಲೀಸರ ವಶಕ್ಕೆ