ಮನೆ ಕಾನೂನು ಸಚಿವರಿಗೆ ತಪ್ಪು ಮಾಹಿತಿ ನೀಡಿದ ಶಿರಸ್ತೇದಾರ್ ಸಸ್ಪೆಂಡ್

ಸಚಿವರಿಗೆ ತಪ್ಪು ಮಾಹಿತಿ ನೀಡಿದ ಶಿರಸ್ತೇದಾರ್ ಸಸ್ಪೆಂಡ್

0

ಮದ್ದೂರು:ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಇತ್ತೀಚೆಗೆ ಮದ್ದೂರು ತಾಲೂಕು ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿದ ಸಂದರ್ಭದಲ್ಲಿ ಇ-ತಂತ್ರಾಂಶ ಜಾರಿ ಕುರಿತು ತಪ್ಪು ಮಾಹಿತಿ ನೀಡಿದ್ದ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.

ಮದ್ದೂರು ತಾಲೂಕು ಕಚೇರಿಯ ಆಡಳಿತ ಶಿರಸ್ತೇದಾ‌ರ್ ಚಂದ್ರಶೇಖ‌ರ್ ಅಮಾನತುಗೊಂಡಿರು ವುದಾಗಿ ಜಿಲ್ಲಾಧಿಕಾರಿ ಡಾ.ಕುಮಾರ ಮಾಹಿತಿ ನೀಡಿದ್ದಾರೆ. ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ತಾಲ್ಲೂಕು ಕಚೇರಿಗೆ ಭೇಟಿ ನೀಡಿದ ಸಂಧರ್ಭದಲ್ಲಿ ಇ-ಆಫೀಸ್ ಗೆ ಸಂಬಂಧಪಟ್ಟಂತೆ ಪರಿಶೀಲನೆ ನಡೆಸಿದಾಗ, ಪೂರ್ಣ ಪ್ರಮಾಣದಲ್ಲಿ ತಂತ್ರಾಂಶವನ್ನು ಅನುಷ್ಟಾನಗೊಳಿಸದೇ ಇರುವುದು ಕಂಡು ಬಂದಿತ್ತು.

ಅಲ್ಲದೆ ತಂತ್ರಾಂಶ ಅನುಷ್ಠಾನ ಕುರಿತು ತಪ್ಪು ಮಾಹಿತಿ ನೀಡಿರುವುದಕ್ಕೆ ಹಾಗೂ ನಿರ್ಲಕ್ಷ್ಯ ವಹಿಸಿರುವುದಕ್ಕೆ ಸಚಿವರು ತೀವ್ರ ಬೇಸರ ವ್ಯಕ್ತಪಡಿಸಿದ್ದರು.

ಹಲವು ಕಾಲಾವಕಾಶ ನೀಡಿದ್ದರೂ ಸಹ ಇ-ಆಫೀಸ್ ತಂತ್ರಾಂಶವನ್ನು ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ತರುವಲ್ಲಿ ಕ್ರಮ ವಹಿಸದೇ ಇರುವುದರಿಂದ ಮದ್ದೂರು ತಾಲೂಕು ಕಚೇರಿಯ ಆಡಳಿತ ಶಿರಸ್ತೇದಾರ್ ಚಂದ್ರಶೇಖ‌ರ್ ಸರ್ಕಾರಿ ಸೇವೆಯಿಂದ ಅಮಾನತ್ತು ಮಾಡಲಾಗಿದೆ.

ಹಿಂದಿನ ಲೇಖನಜಿ.ಎಂ.ಸಿದ್ದೇಶ್ವರ್’ಗೆ ಟಿಕೆಟ್ ನೀಡಬಾರದೆಂದು ಜಿಲ್ಲಾ ಮುಖಂಡರ ನಿಯೋಗ  ಪಕ್ಷದ ಪ್ರಮುಖರಿಂದ ಮನವಿ
ಮುಂದಿನ ಲೇಖನಚಿತ್ರಸಂತೆಯಲ್ಲಿ ಭಾವಗೀತೆಗಳ ಭಾವೋತ್ಸವ