ಮನೆ ಸುದ್ದಿ ಜಾಲ ಕಸದ ರಾಶಿಗೆ ಕಂದನ ಎಸೆದ ತಾಯಿ ಪೊಲೀಸರ ಮುಂದೆ ಪ್ರತ್ಯಕ್ಷ

ಕಸದ ರಾಶಿಗೆ ಕಂದನ ಎಸೆದ ತಾಯಿ ಪೊಲೀಸರ ಮುಂದೆ ಪ್ರತ್ಯಕ್ಷ

0

ಚಾಮರಾಜನಗರ(Chamarajanagara): ಹುಟ್ಟಿದ ಎರಡೇ ದಿನಕ್ಕೆ ಕಂದನನ್ನು ಕಸದ ರಾಶಿಗೆ ಎಸೆದಿದ್ದ ತಾಯಿ, ಪೊಲೀಸರ ಮುಂದೆ ಪ್ರತ್ಯಕ್ಷಳಾಗಿ ಮಗುವಿಗಾಗಿ ಅಂಗಲಾಚಿದ್ದಾಳೆ.

ಕೊಳ್ಳೇಗಾಲ ತಾಲೂಕಿನ ಮತ್ತೀಪುರ ಬಸ್ ನಿಲ್ದಾಣದ ಸಮೀಪದಲ್ಲಿ ಇಂದು ಮುಂಜಾನೆ ಎರಡು ದಿನದ ನವಜಾತ ಗಂಡು ಶಿಶು ಪತ್ತೆಯಾಗಿದೆ‌. ಮಗು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸುವಾಗ ತಾಯಿ ಪ್ರತ್ಯಕ್ಷವಾಗಿದ್ದಾರೆ.

‘ನಾನೇ ಆ ಮಗುವಿನ ತಾಯಿ. ಮಗುವನ್ನು ಬಿಟ್ಟು ಹೋಗಿದ್ದು ನಾನೇ ಎಂದು ಅಲವತ್ತುಕೊಂಡಿದ್ದಾರೆ. ನನಗೆ ಮದುವೆ ಆಗಿದ್ದು, ಗಂಡ ಬಿಟ್ಟು ಹೋಗಿದ್ದಾನೆ.‌ ಮಗು ಸಾಕುವ ಆಸಕ್ತಿ‌ ಇಲ್ಲವೆಂದು’ ಆ ಮಹಿಳೆ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.

ಕೊನೆಗೆ ಮಗುವನ್ನು ತಾಯಿಯ ಸುಪರ್ದಿಗೆ ಕೊಟ್ಟಿರುವ ಪೊಲೀಸರು, ಕಾನೂನು ಪ್ರಕಾರ ದತ್ತು ಕೊಡಿಸಲಾಗುವುದು. ಅಲ್ಲಿಯ ತನಕ ಮಗುವನ್ನು ನೋಡಿಕೊಳ್ಳುವಂತೆ ಹೇಳಿದ್ದಾರೆ. ಬಳಿಕ ಮಗುವಿಗೆ ಯಾವುದೇ ತೊಂದರೆ ಕೊಡದಂತೆ ಎಚ್ಚರಿಕೆ ನೀಡಿ ವಾಪಸ್​ ಕಳುಹಿಸಿದ್ದಾರೆ.

ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಹಿಂದಿನ ಲೇಖನ‌ವಿಶ್ವಾಸ ಮತಯಾಚನೆಯಲ್ಲಿ ಗೆದ್ದ ಏಕನಾಥ ಶಿಂಧೆ
ಮುಂದಿನ ಲೇಖನಮಿನಿ ವಿಧಾನಸೌಧವನ್ನು ಮದುವೆ ಛತ್ರವಾಗಿ ಮಾರ್ಪಾಡಿಸಿದ ಅಧಿಕಾರಿಗಳು: ಕಾರಣವೇನು ಗೊತ್ತೆ?