ಮನೆ ರಾಜ್ಯ ಸಾಲಬಾಧೆಯಿಂದ ಬೇಸತ್ತು ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆಗೆ ಯತ್ನ

ಸಾಲಬಾಧೆಯಿಂದ ಬೇಸತ್ತು ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆಗೆ ಯತ್ನ

0

ರಾಮನಗರ: ರಾಮನಗರ ತಾಲೂಕಿನ ದೊಡ್ಡ ಮಣ್ಣುಗುಡ್ಡೆ ಗ್ರಾಮದ ಒಂದೇ ಕುಟುಂಬದ 7 ಮಂದಿ ಸಾಲಬಾಧೆಯಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.

ಕುಟುಂಬದ 7 ಮಂದಿ ಪೈಕಿ ರಾಜು ಪತ್ನಿ ಮಂಗಳಮ್ಮ(28) ಸಾವನ್ನಪ್ಪಿದ್ದಾರೆ. ಇನ್ನು ರಾಜು(31), ಸೊಲ್ಲಾಪುರದಮ್ಮ (48), ರಾಜು ಮಕ್ಕಳು ಆಕಾಶ್ (9), ಕೃಷ್ಣ (13) ಹಾಗೂ ಮಂಗಳಮ್ಮ ತಂಗಿ ಸವಿತಾ (24), ಸವಿತಾ ಮಗಳು ದರ್ಶಿನಿ(4) ತೀವ್ರವಾಗಿ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಾಲಗಾರರ ಕಾಟ ತಾಳಲಾರದೇ ಹುಟ್ಟೂರು ಬೆಂಗಳೂರಿನ ಸುಬ್ರಪ್ಪನಪಾಳ್ಯ ಬಿಟ್ಟು ರಾಮನಗರದ ದೊಡ್ಡಮಣ್ಣುಗುಂಡಿ ಗ್ರಾಮಕ್ಕೆ ರಾಜು ಕುಟುಂಬ ಸಮೇತ ಬಂದಿದ್ದರು.

ಇಲ್ಲಿರುವ ಸೋದರ ಅತ್ತೆ ಸೊಲ್ಲಾಪುರದಮ್ಮ ಮನೆಯಲ್ಲೇ ರಾಜು, ಪತ್ನಿ, ಮಕ್ಕಳು ವಾಸವಾಗಿದ್ದರು. ರಾಜು ಸುಮಾರು 11 ಲಕ್ಷ ಸಾಲದ ಸುಳಿಗೆ ಸಿಲುಕಿದ್ದ ಎನ್ನಲಾಗಿದೆ.

ಬಡ್ಡಿಗೆ ಬಡ್ಡಿ ಹಾಕಿ ಲಕ್ಷಾಂತರ ರೂ ಸಾಲ ಕಟ್ಟುವಂತೆ ಸಾಲಗಾರರು ದಿನನಿತ್ಯ ಮನೆಗೆ ಬಂದು ಒತ್ತಡ ಹಾಕಿದ್ದರು ಎಂಬ ಆರೋಪ ಕೇಳಿಬಂದಿದೆ.

ಹಿಂದಿನ ಲೇಖನರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿಗಳಿಗೆ ನೀಡುತ್ತಿದೆ 2 ಲಕ್ಷ ಸ್ಕಾಲರ್ ಶಿಪ್: ಪದವಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ
ಮುಂದಿನ ಲೇಖನವಿಜಯಪುರದಲ್ಲಿ  ಮತ್ತೆ 2.7 ರಷ್ಟು ತೀವ್ರತೆಯ ಭೂಕಂಪನ: ಆತಂಕದಲ್ಲಿ ಜನತೆ