ಮನೆ ರಾಜ್ಯ ವೆಂಕಟರೆಡ್ಡಿ‌ ಮುದ್ನಾಳ ಅಂತಿಮ‌ ದರ್ಶನ ಪಡೆದ ಬಿ.ವೈ.ವಿಜಯೇಂದ್ರ

ವೆಂಕಟರೆಡ್ಡಿ‌ ಮುದ್ನಾಳ ಅಂತಿಮ‌ ದರ್ಶನ ಪಡೆದ ಬಿ.ವೈ.ವಿಜಯೇಂದ್ರ

0

ಯಾದಗಿರಿ : ಮಾಜಿ‌ ಶಾಸಕ ವೆಂಕಟರೆಡ್ಡಿ‌ ಮುದ್ನಾಳ ಅವರ ಅಂತಿಮ‌ ದರ್ಶನವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬುಧವಾರ ಪಡೆದರು.

Join Our Whatsapp Group

ಬೆಂಗಳೂರಿನಿಂದ ಕಲಬುರಗಿ ಮೂಲಕ ಬೆಳಗ್ಗೆ 10.30ಕ್ಕೆ ಆಗಮಿಸಿದ ವಿಜಯೇಂದ್ರ ನೇರವಾಗಿ ಮುದ್ನಾಳ ಅವರ ಯಾದಗಿರಿ ಮನೆಗೆ ಆಗಮಿಸಿ ಪಾರ್ಥಿವ ಶರಿರಕ್ಕೆ ಮಾಲಾರ್ಪಣೆ ಮಾಡಿ ಅಂತಿಮ‌ ನಮನ ಸಲ್ಲಿಸಿದರು.ಅವರ ಪುತ್ರ ಮಹೇಶ ರಡ್ಡಿ ಮತ್ತು ಕುಟುಂಬದವರಿಗೆ ಸಾಂತ್ವನ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿ ‘ಮಾಜಿ ಶಾಸಕ ವೆಂಕಟರಡ್ಡಿ ಮುದ್ನಾಳ್ ಅವರ ನಿಧನದಿಂದ ಅವರ ಕುಟುಂಬಕ್ಕೂ, ಕಾರ್ಯಕರ್ತರಿಗೂ ಮತ್ತು ಪಕ್ಷಕ್ಕೂ ತುಂಬಾ ನಷ್ಟವಾಗಿದೆ. ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಆಪ್ತರಾಗಿದ್ದ ಅವರು ಪಕ್ಷದ ಸಂಘಟನೆ ಮತ್ತು ಅಭಿವೃದ್ಧಿ ವಿಷಯದಲ್ಲಿ ಸಾಕಷ್ಟು ಕೆಲಸ ಮಾಡಿದ್ದರು’ ಎಂದರು.

ಮಾಜಿ ಸಚಿವ ರಾಜೂ ಗೌಡ, ಶಾಸಕರಾದ ಬಸವರಾಜ ಮತ್ತಿಮೂಡು, ಡಾ.ಅವಿನಾಶ ಜಾಧವ ಹಾಗೂ ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ್, ಅಮರನಾಥ ಪಾಟೀಲ್, ಮುಖಂಡರಾದ ನಿತೀನ್ ಗುತ್ತೇದಾರ,ಜಿಲ್ಲಾಧ್ಯಕ್ಷ ಅಮೀನ್ ರಡ್ಡಿ ಯಾಳಗಿ, ಸ್ಥಳಿಯ ಬಿಜೆಪಿ ಮುಖಂಡರಾದ ದೇವೇಂದ್ರನಾಥ ನಾದ್, ಪರಶುರಾಮ ಕುರಕುಂದಿ, ವೆಂಕಟರಡ್ಡಿ ಅಬ್ಬೆತುಮಕೂರು, ಗುರು ಕಾಮಾ, ರಾಚಣ್ಣಗೌಡ ಮುದ್ನಾಳ್ ಇತರರು ಇದ್ದರು.ವೆಂಕಟರಡ್ಡಿ ಮುದ್ನಾಳ ಮಂಗಳವಾರ ನಿಧನ ಹೊಂದಿದ್ದರು. ನೂರಾರು ಮಂದಿ ಅಂತಿಮ ದರ್ಶನ ಪಡೆದರು.