ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.
ಸಂಪತ್ತು ಎಂಬುದು ಕೇವಲ ಆಸ್ತಿ, ನಗ, ನಾಣ್ಯ ಮತ್ತು ಖ್ಯಾತಿಯನ್ನು ಗುಡ್ಡೆ ಹಾಕಿಕೊಳ್ಳುವುದರಲ್ಲಿಲ್ಲ. ಕೌಟುಂಬಿಕ, ಸಾಮಾಜಿಕ ಬಾಂಧವ್ಯವನ್ನು ಕಾಪಾಡಿಕೊಳ್ಳುವುದಾಗಿದೆ. ಇತ್ತೀಚಿನ ದಿನಗಳಲ್ಲಿ ಬಾಂಧವ್ಯವೂ ಬಿಸಿನೆಸ್ ಆಗಿದೆ. ನಿಜವಾಗಿ ಬಿಸಿನೆಸ್ ಎನ್ನುವುದು ಬಾಂಧವ್ಯ ಸುಧಾರಣೆಯ ಸೇತು. ಆದರೆ ವ್ಯವಹರಿಸುವ ರೀತಿಯನ್ನು ಸರಿಯಾಗಿ ಕಲಿಯಬೇಕಷ್ಟೇ. ಆಗಷ್ಟೇ ಸಂತೃಪ್ತತೆ.
ಅರ್ಥಪೂರ್ಣವಾಗಿ ಚಟುವಟಿಕೆ. ಉತ್ಪಾದಕತೆ ಮತ್ತು ಇತರರಿಗೆ ಉಪಯುಕ್ತವಾಗಿರುವುದನ್ನು ಉದ್ಯಮ ಒಳಗೊಂಡಿರುತ್ತದೆ. ಅಂತಿಮವಾಗಿ ನೀವು ಸಮುದಾಯಕ್ಕೆ ನೀಡುವ ಸೇವೆಯೇ ಆಗಿರುತ್ತದೆ. ನೀವು ನಂಬಿರುವ ತತ್ವ ಮತ್ತು ಹೊಸ ಆಲೋಚನೆಗಳನ್ನು ಜಾರಿ ಮಾಡುವ ಹಾದಿಯಾಗಿರುತ್ತದೆ. ಉದ್ಯಮ, ವೃತ್ತಿಯೆಂದರೆ ಐಹಿಕವನ್ನು ಬೆಂಬತ್ತುವುದಲ್ಲ. ಉದ್ಯಮ ವ್ಯಾಪಾರ ಮಾಡುವುದರಲ್ಲಿ ಸಂತಸ ಸಿಗದೇ ಇದ್ದರೆ ಆ ಕೆಲಸಕ್ಕೆ ಕೈ ಹಾಕುವುದರಲ್ಲಿ ಯಾವುದೇ ಮಹತ್ವವಿಲ್ಲ. ಹೀಗಾದಾಗ ನೀವು ಅದನ್ನು ಬದಲಿಸಲು ಆಲೋಚಿಸುವುದು ಒಳಿತು. ಇದಕ್ಕೆ ಒಂದಿಷ್ಟು ಸಮಯ, ಪ್ರಯತ್ನ ಬೇಕಾಗುತ್ತದೆ. ಕೊನೆಯ ಪಕ್ಷ ಈಗಿನಿಂದಲೇ ನಿಮ್ಮ ವೃತ್ತಿ ಭವಿಷ್ಯ ಇಲ್ಲವೇ ಉದ್ಯಮ – ವ್ಯವಹಾರವನ್ನು ಹೊಸ ದಿಕ್ಕಿನತ್ತ ಮುನ್ನಡೆಸಬಹುದು.
ಬಿಸಿನೆಸ್ ಎನ್ನುವುದು ಜೀವನದ ಒಂದು ಅಂಶ. ಇದನ್ನು ನಮ್ಮ ವೈಯಕ್ತಿಕ, ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಜೀವನದಿಂದ ಪೂರ್ಣವಾಗಿ ಪ್ರತ್ಯೇಕಿಸಲು ಆಗುವುದಿಲ್ಲ. ಇದು ನಮ್ಮ ಅಸ್ತಿತ್ವದ ಅವಿನಾಭಾವ ಅಂಗವಾಗಿರುತ್ತದೆ. ಪ್ರಾಮಾಣಿಕತೆ ಎನ್ನುವುದು ಕೇವಲ ವಸ್ತುಗಳ ಗುಣಮಟ್ಟದಿಂದ ಅಳಿಯಲಾಗದು. ಇದನ್ನು ಸಂವಹನದ ಗುಣಮಟ್ಟ ಮತ್ತು ಸೇವೆಯಿಂದ ಮಾಪನ ಮಾಡಬೇಕು. ಈ ಹಾದಿಯಿಂದ ವ್ಯವಹಾರದಲ್ಲಿ ಗಳಿಸಿದ ಫಲಿತಾಂಶವು ವಾಣಿಜ್ಯ ಜಗತ್ತಿನಲ್ಲಿ ಪರಿವರ್ತನೆ ಮಾಡುತ್ತದೆ. ಯಾವಾಗ ನಾವು ವ್ಯವಹರಿಸುವ ರೀತಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುತ್ತೇವೋ ಆಗಷ್ಟೇ ನಿಜವಾದ ಸಂತೃಪ್ತಿ ಮನೆ ಮಾಡುತ್ತದೆ.
ಬಿಸಿನೆಸ್ ಮೂಲಾಂಶಗಳು
ಬಿಸಿನೆಸ್ನಲ್ಲಿ ನಾವು ಪ್ರಾಣಿಗಳಿಗಾಗಲೀ, ರೋಬಾಟ್’ಗಳಿಗಾಗಲೀ ಉತ್ಪನ್ನಗಳನ್ನು ಮಾರುವುದಿಲ್ಲ. ನೆನಪಿಡಬೇಕಾದ ಅಂಶವೆಂದರೆ ಮನುಷ್ಯರು ಭಾವನೆಗಳೊಂದಿಗೆ, ಹೃದಯದೊಂದಿಗೆ, ಆತ್ಮ ಮತ್ತು ಮನಸ್ಸಿನೊಂದಿಗೆ ಖರೀದಿ ಮಾಡಲು ಬರುತ್ತಾರೆ. ಅವರು ತಮಗೆ ತಾವು ಒಂದು ಸಂಕೇತ, ಬಣ್ಣ, ಮನುಷ್ಯರೊಂದಿಗೆ ಬೆರೆಯುವ ಹಂಬಲದಿಂದ ಬರುತ್ತಾರೆ. ಈ ಹೊತ್ತಿಗೆ ಜಗತ್ತಿನಲ್ಲಿಮುಖಾಮುಖಿ ಸಂಪರ್ಕ ನಿಧಾನಕ್ಕೆ ಕಡಿಮೆಯಾಗುತ್ತಿದೆ. ವ್ಯಾಪಾರ, ವ್ಯವಹಾರ ಜಗತ್ತು ವ್ಯವಹರಿಸುವ ರೀತಿ ಬದಲಾಗಿದೆ. ನೇರ ಖರೀದಿ ಮಾಡುವ ಸಂತೆ, ಸಮುದಾಯ ಕೇಂದ್ರಿತ ಮಾರಾಟ, ಕೆಲವೆಡೆ ವಿನಿಮಯ ಪದ್ಧತಿಯಂಥ ಸಾಂಪ್ರದಾಯಿಕ ಖರೀದಿ ಮತ್ತು ಮಾರಾಟ ವ್ಯವಸ್ಥೆಗಳು ಮತ್ತೆ ಕಾಣಿಸಿಕೊಂಡಿವೆ.
ವ್ಯವಹಾರದಲ್ಲಿ ಪರಿಣಾಮಕಾರಿ ಸಂವಹನ
ವ್ಯವಹಾರದಲ್ಲಿ ಸಂವಹನ ಅತಿ ಮುಖ್ಯವಾಗಿದೆ. ತಮ್ಮನ್ನು ನಿರಾಳವಾಗಿ ಬರಮಾಡಿಕೊಂಡಿದ್ದಾರೆ ಎಂದು ಬಂದವರಲ್ಲಿ ಅನ್ನಿಸಬೇಕಾದರೆ ನೀವು ತುಂಬ ಮುಕ್ತವಾದ ಆಂಗಿಕ ಭಾಷೆ ಬಳಸಬೇಕು. ನಗು ಮತ್ತು ಆತ್ಮೀಯವಾಗಿ ಕೈಕುಲುಕುವುದರಿಂದ ಅವರಲ್ಲಿರುವ ಬಿಗು ಇಲ್ಲವಾಗುತ್ತದೆ. ಹಾಗಾಗಿ ಕಣ್ಣಲ್ಲಿಕಣ್ಣಿಟ್ಟು ಮಾತನಾಡಿ. ಕೇಳುಗರನ್ನು ಅಣಿಗೊಳಿಸುವ ಮೂಲಕ ಸಂಪರ್ಕ ಸಾಧಿಸಿ. ಅವರಿಗೆ ಮಾತನಾಡಲು ಹೆಚ್ಚು ಅವಕಾಶ ಕೊಡಿ. ನಿತ್ಯದ ಮಾತುಕತೆ ಮತ್ತು ಸಂಭಾಷಣೆಯಲ್ಲಿಹಾಸ್ಯ ಮತ್ತು ಸ್ನೇಹದಿಂದ ಮಾತನಾಡಿದರೆ ತುಂಬಾ ಒಳ್ಳೆಯದಾಗುತ್ತದೆ. ದೈಹಿಕ ಸೌಖ್ಯ ಚೆನ್ನಾಗಿರಬೇಕು ಎಂಬುದನ್ನು ನೆನಪಿನಲ್ಲಿಡಿ. ನಿಮ್ಮ ಆಲೋಚನೆ ಸರಾಗವಾಗಿ ಹರಿಯಲು ನಿಮ್ಮ ದೇಹ ತಕ್ಕ ಸ್ಥಾನ ಸ್ಥಿತಿಯಲ್ಲಿದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ. ಇತರರು ಆರಾಮದಾಯಕವಾಗಿರಲು ತಿಂಡಿ, ತಂಪು ಪಾನೀಯವನ್ನು ಕೊಡಿ. ಯಾವುದೇ ವ್ಯವಹಾರದ ಸಂಬಂಧ ಮತ್ತು ಸಂವಹನಕ್ಕೆ ಇದು ಪರಿಣಾಮಕಾರಿ ಸಾಧನವಾಗಿದೆ.
ಹೀಗೆ ಮಾಡುವ ಮೂಲಕ ಮತ್ತೋರ್ವ ವ್ಯಕ್ತಿ ಹೇಗೆ ನೀವು ನೀಡಿದ ಮಾಹಿತಿಯನ್ನು ಸ್ವೀಕರಿಸುತ್ತಾನೆ ಎಂಬುದನ್ನು ತಿಳಿದುಕೊಳ್ಳಿ. ಅನಂತರ ನಿಮ್ಮ ಮಾತಿನ ರೀತಿಯನ್ನು ಗೊತ್ತುಪಡಿಸಿಕೊಳ್ಳಿ. ಹೀಗೆ ಮಾಡಿದಾಗ ಮಾತ್ರ ಮತ್ತೊಬ್ಬರು ನೀವು ಹೇಳುವ ಸತ್ಯ ಮತ್ತು ವಾಸ್ತವದ ಗೊಡವೆ ಇಲ್ಲದೆ ಆತ್ಮವಿಶ್ವಾಸದಿಂದ ನಿಮ್ಮ ಜತೆ ಪರ್ಯಾಲೋಚಿಸುತ್ತಾರೆ.