ಮನೆ ರಾಜ್ಯ ಚಿತ್ರದುರ್ಗ – ಮೈಸೂರು ನಡುವೆ ರಾಜಹಂಸ ಬಸ್ ಸಂಚಾರ: ಸದುಪಯೋಗಕ್ಕೆ ಮನವಿ

ಚಿತ್ರದುರ್ಗ – ಮೈಸೂರು ನಡುವೆ ರಾಜಹಂಸ ಬಸ್ ಸಂಚಾರ: ಸದುಪಯೋಗಕ್ಕೆ ಮನವಿ

0

ಮೈಸೂರು/ ಚಿತ್ರದುರ್ಗ(Mysuru/ Chitrdurga): ಪಾರಂಪರಿಕ ನಗರಿ ಮೈಸೂರು ಹಾಗೂ ಐತಿಹಾಸಿಕ ನಗರಿ ಚಿತ್ರದುರ್ಗದ ಪ್ರವಾಸ ಪ್ರಿಯರಿಗೆ  ಹಾಗೂ ಪ್ರಯಾಣಿಕರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೋಟೆನಾಡು ಎಕ್ಸ್ ಪ್ರೆಸ್ ಸಿಹಿ ಸುದ್ದಿಯೊಂದನ್ನು ನೀಡಿದೆ.

ಚಿತ್ರದುರ್ಗ ವಿಭಾಗದಿಂದ ಸಾಂಸ್ಕೃತಿಕ ನಗರಿ ಮೈಸೂರಿಗೆ ನೂತನ ರಾಜಹಂಸ ಬಸ್ ಸಂಚಾರ ಆರಂಭಿಸುತ್ತಿದ್ದು, ಪ್ರಯಾಣಿಕರು ಇದರ ಸದುಪಯೋಗಪಡಿಸಿಕೊಳ್ಳಲು ಕೋರಲಾಗಿದೆ.

ಚಿತ್ರದುರ್ಗ ಬಸ್ ನಿಲ್ದಾಣದಿಂದ ಬೆಳಿಗ್ಗೆ 5.30 ಗಂಟೆಗೆ ರಾಜಹಂಸ ಬಸ್ ಹೊರಡಲಿದ್ದು,  11 ಗಂಟೆಗೆ ಮೈಸೂರು ತಲುಪಲಿದೆ. ನಂತರ ಮೈಸೂರಿನಿಂದ ಮಧ್ಯಾಹ್ನ 12 ಗಂಟೆಗೆ ಬಸ್ ಹೊರಡಲಿದ್ದು, ಸಂಜೆ 5.30ಕ್ಕೆ ಚಿತ್ರದುರ್ಗಕ್ಕೆ ತಲುಪಲಿದೆ.

ಪ್ರಯಾಣಿಕರು ಬಸ್ ನ ಅನುಕೂಲ ಪಡೆದುಕೊಳ್ಳಬೇಕು ಎಂದು ವಿಭಾಗೀಯ ನಿಯಂತ್ರಣ ಅಧಿಕಾರಿ ಸತ್ಯಂ ಸುಂಧರಂ , ವಿಭಾಗೀಯ ಸಂಚಾರಿ ಅಧಿಕಾರಿ ಸತೀಶ್  ಮತ್ತು ಘಟಕ ವ್ಯೆವಸ್ತಾಪಕರು ಹೊನ್ನಪ್ಪ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.