ಮನೆ ರಾಜಕೀಯ ಜೆಡಿಎಸ್ ಬಗ್ಗೆ ಈಗಲೂ ಬೇಸರ: ಆದರೂ ಕುಪೇಂದ್ರ ರೆಡ್ಡಿ ಅವರಿಗೆ ನನ್ನ ಮತ ಎಂದ ಶಾಸಕ...

ಜೆಡಿಎಸ್ ಬಗ್ಗೆ ಈಗಲೂ ಬೇಸರ: ಆದರೂ ಕುಪೇಂದ್ರ ರೆಡ್ಡಿ ಅವರಿಗೆ ನನ್ನ ಮತ ಎಂದ ಶಾಸಕ ಜಿ.ಟಿ ದೇವೇಗೌಡ

0

ಬೆಂಗಳೂರು(Bengaluru):  ಇಂದು ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ವಿಧಾನಸೌಧದಲ್ಲಿ  ಮತದಾನ ಪ್ರಕ್ರಿಯೆ ನಡೆದಿದೆ. 224 ಶಾಸಕರು ತಮ್ಮ ಮತ ಚಲಾಯಿಸಿದ್ದು, ಇಂದು ಸಂಜೆ ಫಲಿತಾಂಶ ಪ್ರಕಟವಾಗಲಿದೆ.

ಈ ಮಧ್ಯೆ ಮತ್ತೊಬ್ಬ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡರು ಅಡ್ಡಮತದಾನ ಮಾಡುವ ಅನುಮಾನ ಇತ್ತು. ಆದರೆ ಈ ಬಗ್ಗೆ ನಿನ್ನೆಯೇ ಸ್ಪಷ್ಟನೆ ನೀಡಿದ್ದ ಜಿ.ಟಿ ದೇವೇಗೌಡರು, ನಾನು ಜೆಡಿಎಸ್ ಅಭ್ಯರ್ಥಿಗೆ ಮತ ಹಾಕುತ್ತೇನೆ ಎಂದಿದ್ದರು. ಅಂತೆಯೇ ಇಂದು ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರಿಗೆ ಶಾಸಕ ಜಿ.ಟಿ ದೇವೇಗೌಡ ಮತದಾನ ಮಾಡಿದ್ದಾರೆ ಎನ್ನಲಾಗಿದೆ.

ಈ ಕುರಿತು ಮಾತನಾಡಿರುವ ಅವರು,  ಜೆಡಿಎಸ್ ನೋಡಿ ಜನ ನನ್ನನ್ನ ಗೆಲ್ಲಿಸಿದ್ದಾರೆ. ಈಗಲೂ ಜೆಡಿಎಸ್ ಬಗ್ಗೆ ನನಗೆ ಬೇಸರವಿದೆ. ಆದರೂ ಜೆಡಿಎಸ್ ಅಭ್ಯರ್ಥಿ ಕುಪೇಂದ್ರರೆಡ್ಡಿ ಅವರಿಗೆ ಮತ ಚಲಾಯಿಸುವೆ.  ನಾನು ನನ್ನ ಜೆಡಿಎಸ್ ಅಭ್ಯರ್ಥಿಗೆ ಮತ ನೀಡುವೆ ಎಂದಿದ್ದಾರೆ.