ಮನೆ ಸುದ್ದಿ ಜಾಲ ಅಪಹರಣಕ್ಕೊಳಗಾಗಿದ್ದ ಬಾಲಕನ ರಕ್ಷಣೆ: ನೆಮ್ಮದಿಯ ನಿಟ್ಟುಸಿರು ಬಿಟ್ಟ ವೈದ್ಯ ದಂಪತಿ

ಅಪಹರಣಕ್ಕೊಳಗಾಗಿದ್ದ ಬಾಲಕನ ರಕ್ಷಣೆ: ನೆಮ್ಮದಿಯ ನಿಟ್ಟುಸಿರು ಬಿಟ್ಟ ವೈದ್ಯ ದಂಪತಿ

0
Father roughly holds the hands of his son. Child abuse, domestic violence. Concept image.

ಮೈಸೂರು (Mysuru): ಅಪಹರಣಕ್ಕೊಳಗಾಗಿದ್ದ ಮೈಸೂರಿನ ವೈದ್ಯ ದಂಪತಿಯ ಪುತ್ರನನ್ನು ಪೊಲೀಸರು ರಕ್ಷಿಸಿದ್ದಾರೆ. ಬಾಲಕ ಸುರಕ್ಷಿತವಾಗಿ ಪೋಷಕರ ಮಡಿಲು ಸೇರಿದ್ದಾನೆ.

ಚೆಲುವಾಂಬ ಆಸ್ಪತ್ರೆಯ ಡಾ.ಸುಮಾ, ಡಾ.ಗಿರೀಶ್‌ ಅವರ 12 ವರ್ಷದ ಪುತ್ರ ಅನಿರ್ಜಿತ್ ನನ್ನು ಅಪಹರಣ ಮಾಡಲಾಗಿತ್ತು.

ಬಾಲಕ ರಸ್ತೆಯಲ್ಲಿ ಸೈಕಲ್‌ ತುಳಿದುಕೊಂಡು ಹೋಗುತ್ತಿದ್ದಾಗ ನೀಲಿ ಬಣ್ಣದ ಕಾರಿನಲ್ಲಿ ಬಂದಿದ್ದ ಅಪಹರಣಕಾರು ಬಾಲಕನನ್ನು ಅಪಹರಿಸಿದ್ದರು. ಈ ಘಟನೆ ಕುವೆಂಪುನಗರ ಬಿಇಎಂಎಲ್‌ ಬಡಾವಣೆಯಲ್ಲಿ ನಡೆದಿತ್ತು.

ಪ್ರಕರಣ ದಾಖಲಿಸಿಕೊಂಡು ಬಾಲಕನ ರಕ್ಷಣೆಗೆ ಮುಂದಾದ ಕುವೆಂಪು ನಗರ ಪೊಲೀಸರು ಮಧ್ಯರಾತ್ರಿ ವೇಳಗೆ ಬಾಲಕನನ್ನು ರಕ್ಷಿಸಿದ್ದಾರೆ. ಬಾಲಕನ ಮನೆಗೆ ಭೇಟಿ ನೀಡಿದ್ದ ನಗರ ಪೊಲೀಸ್‌ ಆಯುಕ್ತ ಡಾ.ಚಂದ್ರಗುಪ್ತ ಅವರು ಕುಟುಂಬದವರಿಗೆ ಧೈರ್ಯ ತುಂಬಿ ಮಾಹಿತಿ ಪಡೆದುಕೊಂಡಿದ್ದರು.

ಬಾಲಕನ ರಕ್ಷಣಾ ಕಾರ್ಯಾಚರಣೆ ಬಗ್ಗೆ ಮಾಹಿತಿ ಇನ್ನು ಲಭ್ಯವಾಗಿಲ್ಲ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡುವ ಸಾಧ್ಯತೆ ಇದೆ.