ಮನೆ ರಾಷ್ಟ್ರೀಯ ಏಕನಾಥ ಶಿಂಧೆ ಸೇರಿ 12 ರೆಬೆಲ್‌ ಶಾಸಕರ ಅನರ್ಹತೆಗೆ ಶಿವಸೇನೆ ಮನವಿ

ಏಕನಾಥ ಶಿಂಧೆ ಸೇರಿ 12 ರೆಬೆಲ್‌ ಶಾಸಕರ ಅನರ್ಹತೆಗೆ ಶಿವಸೇನೆ ಮನವಿ

0

ಮುಂಬೈ (Mumbai): ಮಹಾರಾಷ್ಟ್ರದಲ್ಲಿ ರಾಜಕೀಯ ಸಂಘರ್ಷ ಭುಗಿಲೆದ್ದಿದೆ. ಬಂಡಾಯ ಶಾಸಕರ ನಾಯಕ ಏಕನಾಥ್ ಶಿಂಧೆ ಸೇರಿದಂತೆ 12 ರೆಬೆಲ್ ಶಾಸಕರ ಅನರ್ಹತೆಗೆ ಶಿವಸೇನೆ ಮನವಿ ಮಾಡಿದೆ.

ಮೂಲಗಳ ಪ್ರಕಾರ ಪ್ರಸ್ತುತ ರೆಬೆಲ್ ಶಾಸಕರ ನಾಯಕತ್ವ ವಹಿಸಿರುವ ಏಕನಾಥ್ ಶಿಂಧೆ ಸೇರಿದಂತೆ ಅವರ ಬಣದಲ್ಲಿರುವ 12 ಶಾಸಕರನ್ನು ಅನರ್ಹಗೊಳಿಸುವಂತೆ  ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ನಾಯಕರು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಉಪಸಭಾಪತಿಗೆ ಮನವಿ ಮಾಡಿದ್ದಾರೆ.

ಅನರ್ಹತೆಗೆ ಪ್ರಸ್ತಾವನೆ ಸಲ್ಲಿಸಿರುವ 12 ಶಾಸಕರ ಪಟ್ಟಿಯಲ್ಲಿ ಏಕನಾಥ್ ಶಿಂಧೆ, ಪ್ರಕಾಶ್ ಸುರ್ವೆ, ತಾನಾಜಿ ಸಾವಂತ್, ಮಹೇಶ್ ಶಿಂಧೆ, ಅಬ್ದುಲ್ ಸತ್ತಾರ್, ಸಂದೀಪ್ ಭೂಮಾರೆ, ಭರತ್ ಗೊಗವಾಲೆ, ಸಂಜಯ್ ಶಿರ್ಸಾತ್, ಯಾಮಿನಿ ಯಾದವ್, ಅನಿಲ್ ಬಾಬರ್, ಬಾಲಾಜಿ ದೇವದಾಸ್ ಮತ್ತು ಲತಾ ಚೌಧರಿ ಅವರ ಹೆಸರುಗಳಿವೆ ಎಂದು ತಿಳಿದುಬಂದಿದೆ.

ಈ ಕುರಿತು ಮಾಹಿತಿ ನೀಡಿರುವ ಶಿವಸೇನೆ ಪಕ್ಷದ ಸಂಸದ ಅರವಿಂದ್ ಸಾವಂತ್ ಅವರು, ‘ನಾವು ಡೆಪ್ಯೂಟಿ ಸ್ಪೀಕರ್ ಮುಂದೆ ಮನವಿ ಸಲ್ಲಿಸಿದ್ದೇವೆ ಮತ್ತು ಏಕನಾಥ್ ಶಿಂಧೆ ಸೇರಿದಂತೆ 12 ಶಾಸಕರು ನಿನ್ನೆಯ ಶಾಸಕಾಂಗ ಸಭೆಗೆ ಹಾಜರಾಗದ ಕಾರಣ ಅವರ ಸದಸ್ಯತ್ವವನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದ್ದೇವೆ ಎಂದು ಹೇಳಿದ್ದಾರೆ.

ಸಭೆಗೂ ಮುನ್ನ ನೋಟಿಸ್ ನೀಡಲಾಗಿದ್ದು, ಸಭೆಗೆ ಹಾಜರಾಗದಿದ್ದರೆ ಸಂವಿಧಾನದ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿತ್ತು. ಅದಾಗ್ಯೂ ಬಂಡಾಯ ಶಾಸಕರು ಹಾಜರಾಗಿಲ್ಲ. ಕೆಲವರು ಬರಲಿಲ್ಲ, ಇನ್ನು ಕೆಲವರು ಅನಗತ್ಯ ಕಾರಣಗಳನ್ನು ಕೊಟ್ಟಿದ್ದಾರೆ ಎಂದು ಸಾವಂತ್ ಹೇಳಿದ್ದಾರೆ.

ಹಿಂದಿನ ಲೇಖನಮಕ್ಕಳು, ಪತ್ನಿಯನ್ನು ಬಾವಿಗೆ ತಳ್ಳಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ: ಮೂವರು ಮಕ್ಕಳ ಸಾವು
ಮುಂದಿನ ಲೇಖನಅಪಹರಣಕ್ಕೊಳಗಾಗಿದ್ದ ಬಾಲಕನ ರಕ್ಷಣೆ: ನೆಮ್ಮದಿಯ ನಿಟ್ಟುಸಿರು ಬಿಟ್ಟ ವೈದ್ಯ ದಂಪತಿ