ಮನೆ ಅಪರಾಧ ಮೈಸೂರು: ವಿವಿ ನೌಕರನ ಬರ್ಬರ ಹತ್ಯೆ

ಮೈಸೂರು: ವಿವಿ ನೌಕರನ ಬರ್ಬರ ಹತ್ಯೆ

0

ಮೈಸೂರು(Mysuru): ನಿವೃತ್ತಿಗೆ ಒಂದು ದಿನ ಇರುವಾಗಲೇ ವಿವಿ ನೌಕರನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವಿದ್ಯಾರಣ್ಯಪುರಂನ ಭೂತಾಳೆ ಮೈದಾನದಲ್ಲಿ ನಡೆದಿದೆ.

ಕನಕಗಿರಿ ನಿವಾಸಿ ಕೃಷ್ಣೇಗೌಡ(60) ಮೃತ ದುರ್ದೈವಿ.

ನಿನ್ನೆ ರಾತ್ರಿ ಕೃಷ್ಣೇಗೌಡ ಸ್ನೇಹಿತರೊಂದಿಗೆ ಪಾರ್ಟಿ ಮಾಡಿದ್ದು, ಇಂದು ಬೆಳಗ್ಗೆ ಭೂತಾಳೆ ಮೈದಾನದಲ್ಲಿ ಕೃಷ್ಣೇಗೌಡನ ಮೃತದೇಹ ಪತ್ತೆಯಾಗಿದೆ. ಮಧ್ಯರಾತ್ರಿ ಚಾಕುವಿನಿಂದ ಇರಿದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ವಿದ್ಯಾರಣ್ಯಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.